Advertisement

ತೀಸ್ತಾ ಅರ್ಜಿ ವಿಚಾರಣೆ ಮುಂದೂಡಿದ ಅಹಮದಾಬಾದ್‌ ಕೋರ್ಟ್

08:39 PM Jul 08, 2022 | Team Udayavani |

ಗಾಂಧಿನಗರ: ಮುಂಬೈ ಮೂಲದ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್‌ ಮತ್ತು ನಿವೃತ್ತ ಡಿಜಿಪಿ ಆರ್‌.ಬಿ. ಶ್ರೀಕುಮಾರ್‌ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಅಹಮದಾಬಾದ್‌ ನ್ಯಾಯಾಲಯವು ಮುಂದೂಡಿದೆ.

Advertisement

ಜು.15ರಂದು ಮುಂದಿನ ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ತಿಳಿಸಿದೆ. ಗುಜರಾತ್‌ ಗಲಭೆ ಪ್ರಕರಣದ ಎಸ್‌ಐಟಿ ಅಂತಿಮ ವರದಿ ಮತ್ತು ಸುಪ್ರೀಂ ಕೋರ್ಟ್‌ ಆದೇಶದ ಪ್ರತಿಯು ಅತ್ಯಂತ ದೊಡ್ಡದಾಗಿದ್ದು, ಅದನ್ನು ಸಂಪೂರ್ಣವಾಗಿ ಅರಿಯಲು ಸಮಯ ಬೇಕೆಂದು ಸರ್ಕಾರದ ಪರ ವಕೀಲರು ನ್ಯಾಯಾಲಯದೆದುರು ಹೇಳಿದ್ದಾರೆ.

ತೀಸ್ತಾ ಪರ ವಕೀಲರು ಅದನ್ನು ವಿರೋಧಿಸಿದ್ದಾರಾದರೂ ನ್ಯಾಯಾಲಯ ವಿಚಾರಣೆ ಮುಂದೂಡಿ, ಇನ್ನಷ್ಟು ಸಮಯಾವಕಾಶವನ್ನು ಕೊಟ್ಟಿದೆ.

 

Advertisement

Udayavani is now on Telegram. Click here to join our channel and stay updated with the latest news.

Next