Advertisement

ಜಾರ್ಖಂಡ್‌ : ನಕ್ಸಲರಿಂದ ಬಿಜೆಪಿ ಕಛೇರಿ ಧ್ವಂಸ

09:48 AM May 04, 2019 | Hari Prasad |

ಜಾರ್ಖಂಡ್‌: ಇಲ್ಲಿನ ಸರಾಯ್‌ ಖೇಲಾ ಜಿಲ್ಲೆಯ ಖರ್ಸ್ವಾನ್‌ ಎಂಬಲ್ಲಿ ಭಾರತೀಯ ಜನತಾ ಪಕ್ಷದ ಚುನಾವಣಾ ಪ್ರಚಾರ ಕಛೇರಿಯನ್ನು ನಕ್ಸಲರು ಬಾಂಬ್‌ ನ್ಪೋಟಿಸಿ ಧ್ವಂಸಗೊಳಿಸಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಅವರು ಈ ಭಾಗದಲ್ಲಿ ಇಂದು ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಹಿನ್ನಲೆಯಲ್ಲಿ ನಕ್ಸಲರು ಈ ಕೃತ್ಯ ಎಸಗಿರಬಹುದೆಂದು ಸಂಶಯಿಸಲಾಗಿದೆ.

Advertisement

ಗುರುವಾರ ಮಧ್ಯರಾತ್ರಿ 12.30ರ ಸುಮಾರಿಗೆ ನಕ್ಸಲರು ಈ ನ್ಪೋಟವನ್ನು ನಡೆಸಿದ್ದಾರೆಂದು ಪ್ರಾಥಮಿಕ ಮಾಹಿತಿಗಳಿಂದ ತಿಳಿದುಬಂದಿದೆ. ಖುಂಟಿ ಲೊಖಸಭಾ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸುತ್ತಿರುವ ಜಾರ್ಖಂಡ್‌ ನ ಮಾಜೀ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಅರ್ಜುನ್‌ ಮುಂಡಾ ಅವರು ತಮ್ಮ ಚುನಾವಣಾ ಪ್ರಚಾರ ಕಾರ್ಯಗಳಿಗಾಗಿ ಈ ಕಛೇರಿಯನ್ನು ಬಳಸುತ್ತಿದ್ದರೆಂದು ತಿಳಿದುಬಂದಿದೆ.

ಅಮಿತ್‌ ಶಾ ಅವರು ಇಂದು ಜಾರ್ಖಂಡ್‌ ನ ಖುಂಟಿ, ಕೊಡೆರ್ಮಾ ಮತ್ತು ರಾಂಚಿ ಸೇರಿದಂತೆ ಹಲವು ಕಡೆ ಚುನಾವಣಾ ಪ್ರಚಾರ ಸಭೆಗಳನ್ನು ನಡೆಸಲಿದ್ದಾರೆ.

ಮಹಾರಾಷ್ಟ್ರದ ಗಢ್‌ ಚಿರೋಳಿಯಲ್ಲಿ ಸುಧಾರಿತ ನ್ಪೋಟಕಗಳನ್ನು ಬಳಸಿ ನಕ್ಸಲರು ಕ್ಯು.ಆರ್‌.ಟಿ. ಪಡೆಯ 16 ಪೊಲೀಸರನ್ನು ಬಲಿ ಪಡೆದ ಎರಡು ದಿನಗಳ ಬಳಿಕ ಜಾರ್ಖಂಡ್‌ ನಲ್ಲಿ ಈ ಘಟನೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next