Advertisement

ಆಹಾರ್‌: ಉಚಿತ ಆರೋಗ್ಯ ತಪಾಸಣೆ ಶಿಬಿರ 

04:32 PM Nov 13, 2018 | Team Udayavani |

ಮುಂಬಯಿ: ಆಹಾರ್‌ವಲಯ 10ರ ಆಶ್ರಯದಲ್ಲಿ ಉಚಿತ ಆರೋಗ್ಯ, ನೇತ್ರ ತಪಾಸಣೆ ಶಿಬಿರವು ಇತ್ತೀಚೆಗೆ ದಹಿಸರ್‌ ಪೂರ್ವದ ಹೊಟೇಲ್‌ ಗೋಕುಲಾನಂದ ಸಭಾಂಗಣದಲ್ಲಿ ನಡೆಯಿತು.

Advertisement

ಹೊಟೇಲ್‌ ಕಾರ್ಮಿಕರಿಗಾಗಿ ನಡೆದ ಈ ಶಿಬಿರದಲ್ಲಿ ರಹೇಜಾ ಹಾಸ್ಪಿಟಲ್‌ ಮಾಹೀಮ್‌ ಇಲ್ಲಿನ ವೈದ್ಯರು ಪಾಲ್ಗೊಂಡು ಹೊಟೇಲ್‌ ಕಾರ್ಮಿಕರ ಆರೋಗ್ಯ ತಪಾಸಣೆಗೈದರು. ನೇತ್ರ ಪರೀಕ್ಷೆಯ ಬಳಿಕ ಅರ್ಹರಿಗೆ ಕನ್ನಡಕ ವಿತರಿಸಲಾಯಿತು. ವೈದ್ಯರು ಆರೋಗ್ಯ ತಪಾಸಣೆಯ ಅನಂತರ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಸಲಹೆ ನೀಡಿದರು.

ಆರೋಗ್ಯ ತಪಾಸಣಾ ಶಿಬಿರದಲ್ಲಿ ಆಹಾರ್‌ನ ವಲಯ 10ರ ಉಪಾಧ್ಯಕ್ಷ ಪ್ರಭಾಕರ ಶೆಟ್ಟಿ, ಆಹಾರ್‌ನ ಪೊಲೀಸ್‌ ಸಮಿತಿಯ ಕಾರ್ಯಾಧ್ಯಕ್ಷ ಡಾ| ಸತೀಶ್‌ ಬಿ. ಶೆಟ್ಟಿ, ಆಹಾರ್‌ನ ಕ್ಷೇಮಾಭಿವೃದ್ಧಿ ಸಮಿತಿಯ ಸದಸ್ಯರು, ಬೊರಿವಲಿ-ದಹಿಸರ್‌ ಪರಿಸರದ ಹೊಟೇಲ್‌ ಉದ್ಯಮಿಗಳು, ಹೊಟೇಲ್‌ ಆಡಳಿತಗಾರರು,  ಗೋಕುಲಾನಂದ ಹೊಟೇಲ್‌ನ ಮಾಲಕ ರಾಜೇಶ್‌ ಕೃಷ್ಣ ಆಚಾರ್ಯ  ಉಪಸ್ಥಿತರಿದ್ದರು.

ದಹಿಸರ್‌-ಬೊರಿವಲಿ ಪರಿಸರದ ಹೊಟೇಲ್‌ ಕಾರ್ಮಿಕರು ಆಹಾರ್‌ನ ವಲಯ ಹತ್ತರ ವತಿಯಿಂದ ನಡೆದ ಉಚಿತ ಆರೋಗ್ಯ ಮತ್ತು ನೇತ್ರ ತಪಾಸಣಾ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು. ಸಂಸ್ಥೆಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ವೈದ್ಯರು, ಅತಿಥಿಗಳನ್ನು ಪುಷ್ಪ ಗುತ್ಛವನ್ನಿತ್ತು ಗೌರವಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next