Advertisement

ಕಾಪ್ಟರ್‌ ಹಗರಣ: ತ್ಯಾಗಿ ವಿರುದ್ಧ ಆರೋಪಪಟ್ಟಿ ಸಲ್ಲಿಕೆ

07:45 AM Sep 02, 2017 | Team Udayavani |

ಹೊಸದಿಲ್ಲಿ: ಆಗಸ್ಟಾ ಹೆಲಿಕಾಪ್ಟರ್‌ ಖರೀದಿ ಹಗರಣಕ್ಕೆ ಸಂಬಂಧಪಟ್ಟ ತನಿಖೆ ಮುಗಿಸಿದ ಸಿಬಿಐ ಶುಕ್ರವಾರ ವಾಯುಪಡೆಯ ಮಾಜಿ ಮುಖ್ಯಸ್ಥ ಎಸ್‌.ಪಿ ತ್ಯಾಗಿ ಮತ್ತು ಇತರೆ 9 ಮಂದಿ ವಿರುದ್ಧ ಆರೋಪಪಟ್ಟಿ ಸಲ್ಲಿಸಿದೆ.

Advertisement

ವಿವಿಐಪಿಗಳ ಓಡಾಟಕ್ಕೆ ಬೇಕಾದ ಕಾಪ್ಟರ್‌ ಖರೀದಿಯಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಸಿಬಿಐ ತನಿಖೆ ನಡೆಸಿತ್ತು. ಕಾಪ್ಟರ್‌ ಡೀಲ್‌ನಲ್ಲಿ 450 ಕೋಟಿ ರೂ. ಲಂಚ ಪಡೆದ ಪ್ರಕರಣ ಸಂಬಂಧ ತ್ಯಾಗಿ ಮತ್ತು ಅವರ ಸಂಬಂಧಿಕರು, ವಕೀಲ ಗೌತಮ್‌ ಖೈತಾನ್‌ ಮತ್ತು ಇತರರ ವಿರುದ್ಧ ಆರೋಪ ಹೊರಿಸಲಾಗಿದೆ. ಲಂಚದ ಹಣ ಭಾರತದಲ್ಲಿನ ಬೇರೆ ಬೇರೆ ಕಂಪನಿಗೆ ಬರುವಂತೆ ಮಾಡುವಲ್ಲಿ ಖೈತಾನ್‌ ಪ್ರಮುಖ ಪಾತ್ರ ವಹಿಸಿದ್ದ ಎಂದು ಹೇಳಿದೆ. ಡಿ.9ರಂದು ತ್ಯಾಗಿ ಮತ್ತು ಸಂಬಂಧಿ ಸಂಜೀವ್‌ರನ್ನು ಸಿಬಿಐ ಬಂಧಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next