Advertisement

ಆಗುಂಬೆ ಘಾಟಿ ದುರಸ್ತಿ: ವಾಹನ ಸಂಚಾರ ನಿಷೇಧ

12:30 AM Mar 08, 2019 | |

ಉಡುಪಿ: ಆಗುಂಬೆ ಘಾಟಿ ದುರಸ್ತಿ ಕಾರ್ಯವನ್ನು ಕೈಗೆತ್ತಿಕೊಳ್ಳುವ ಕಾರಣ ಘಾಟಿ ರಸ್ತೆಯ ಸಂಚಾರವನ್ನು ಮಾ.19ರಿಂದ 30 ದಿನಗಳ ಕಾಲ ಸ್ಥಗಿತಗೊಳಿಸಿ ಬದಲಿ ಮಾರ್ಗದಲ್ಲಿ ವಾಹನ ಸಂಚಾರ ವ್ಯವಸ್ಥೆ ಮಾಡಿ ಆದೇಶಿಸಲಾಗಿದೆ.

Advertisement

ಈ ಅವಧಿಯಲ್ಲಿ ಆಗುಂಬೆ ಘಾಟಿ ವ್ಯಾಪ್ತಿಯಲ್ಲಿ ಸಂಚರಿಸುವ ಲಘು ವಾಹನಗಳಾದ ಸಾಮಾನ್ಯ ಬಸ್‌ಗಳು, ಜೀಪು, ವ್ಯಾನ್‌, ಎಲ್‌ಸಿವಿ (ಮಿನಿ ವ್ಯಾನ್‌), ದ್ವಿಚಕ್ರ ವಾಹನಗಳು ಉಡುಪಿ-ಕಾರ್ಕಳ-ಮಾಳಘಾಟಿ- ಶೃಂಗೇರಿ- ಕೊಪ್ಪ- ತೀರ್ಥಹಳ್ಳಿ (ರಾಷ್ಟ್ರೀಯ ಹೆದ್ದಾರಿ 169) ರಸ್ತೆಯಲ್ಲಿ; ಭಾರೀ ವಾಹನಗಳಾದ ರಾಜಹಂಸ, ಐರಾವತ ಬಸ್‌ಗಳು ಮತ್ತು ಖಾಸಗಿ ಐಶಾರಾಮಿ ಬಸ್‌ಗಳು, ಬುಲೆಟ್‌ ಟ್ಯಾಂಕರ್, ಶಿಪ್‌ ಕಾರ್ಗೋ ಕಂಟೈನರ್ಸ್‌, ಲಾಂಗ್‌ ಚಾಸೀಸ್‌ ವಾಹನಗಳು ಉಡುಪಿ-ಕುಂದಾಪುರ-ಸಿದ್ದಾಪುರ-ಹೊಸಂಗಡಿ-ಮಾಸ್ತಿಕಟ್ಟೆ-ತೀರ್ಥಹಳ್ಳಿ (ರಾಜ್ಯ ಹೆದ್ದಾರಿ 52) ರಸ್ತೆಯಲ್ಲಿ ಸಂಚರಿಸಲು ಆದೇಶಿಸಲಾಗಿದೆ.
 

Advertisement

Udayavani is now on Telegram. Click here to join our channel and stay updated with the latest news.

Next