Advertisement

Agumbe ಅಪಘಾತ: ಗಾಯಾಳು ಯುವತಿ ಸಾವು

09:52 PM Jun 19, 2023 | Team Udayavani |

ಬ್ರಹ್ಮಾವರ: ಆಗುಂಬೆಯಲ್ಲಿ ನಡೆದ ಬಸ್‌-ಬೈಕ್‌ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಬಾರಕೂರು ಹೊಸಾಳದ ನಿರ್ಮಿತಾ (19) ರವಿವಾರ ರಾತ್ರಿ ಮೃತಪಟ್ಟಿದ್ದಾರೆ.

Advertisement

ಪ್ರಸ್ತುತ ಕನ್ನಾರಿನಲ್ಲಿ ನೆಲೆಸಿರುವ ಬಾಲಕೃಷ್ಣ ಮತ್ತು ಗಾಯತ್ರಿ ದಂಪತಿಯ ಏಕೈಕ ಪುತ್ರಿ ನಿರ್ಮಿತಾ, ಬ್ರಹ್ಮಾವರ ಸ.ಪ.ಪೂ. ಕಾಲೇಜಿನಲ್ಲಿ ಶಿಕ್ಷಣ ಮುಗಿಸಿ ಪದವಿಗಾಗಿ ಉಡುಪಿಯ ತೆಂಕನಿಡಿಯೂರು ಕಾಲೇಜಿಗೆ ಸೇರ್ಪಡೆಯಾಗಿದ್ದರು. ಪ್ರತಿಭಾನ್ವಿತೆಯಾದ ನಿರ್ಮಿತಾ ಪಠ್ಯೇತರ ಚಟುವಟಿಕೆಯಲ್ಲೂ ಸಕ್ರೀಯರಾಗಿದ್ದರು.

ಹೆಲ್ಮೆಟ್‌ ಇದ್ದರೂ…
ರವಿವಾರ ರಜಾ ದಿನವಾದ್ದರಿಂದ ಒಂದೇ ಕುಟುಂಬದ 6 ಮಂದಿ ಮೂರು ಬೈಕ್‌ನಲ್ಲಿ ಆಗುಂಬೆಗೆ ತೆರಳಿದ್ದರು. ಸೂರ್ಯಾಸ್ತಮಾನ ವೀಕ್ಷಣ ಸ್ಥಳಕ್ಕೆ ಭೇಟಿ ನೀಡಿ ವಾಪಸಾಗುತ್ತಿದ್ದಾಗ ಬೈಕ್‌ಗೆ ಬಸ್‌ ಢಿಕ್ಕಿ ಹೊಡೆದಿತ್ತು. ನಿರ್ಮಿತಾ ಕುಳಿತಿದ್ದ ಬೈಕ್‌ ಸವಾರಿ ಮಾಡುತ್ತಿದ್ದ ಸಂಬಂಧಿ ಶಶಾಂಕ್‌ ತಲೆಗೆ ಹೆಲ್ಮೆಟ್‌ ಧರಿಸಿದ್ದರೂ, ಬಲವಾದ ಪೆಟ್ಟು ತಗಲಿ ವಿಪರೀತ ರಕ್ತಸ್ರಾವವಾಗಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next