Advertisement

ಕೃಷಿ ಉತ್ಪನ್ನ ಮಾರಾಟಕ್ಕೆ ಚಾಲನೆ

06:07 PM Apr 22, 2020 | Suhan S |

ರಾಣಿಬೆನ್ನೂರ: ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರ ವತಿಯಿಂದ ರೈತರು ಬೆಳೆದಿರುವ ತರಕಾರಿ, ಹಣ್ಣು, ಹೂಗಳನ್ನು ರೈತರ ಉತ್ಪಾದಕ ಸಂಘಗಳ ಮೂಲಕ ಖರೀದಿಸಿ ಮಾರುಕಟ್ಟೆಗೆ ಮತ್ತು ಹಳ್ಳಿಯ ಮನೆ ಬಾಗಿಲಿಗೆ ವಾಹನಗಳ ಮೂಲಕ ಮಾರಾಟ ಮಾಡಲಾಗುತ್ತಿದೆ ಎಂದು ಹಿರಿಯ ವಿಜ್ಞಾನಿ ಹಾಗೂ ಕೇಂದ್ರದ ಮುಖ್ಯಸ್ಥ ಡಾ| ಅಶೋಕ ಪಿ. ಹೇಳಿದರು. ಹನುಮನಮಟ್ಟಿಯಲ್ಲಿ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಖರೀದಿಸಿರುವ ತರಕಾರಿಗಳನ್ನು ಯಾವುದೇ ದಲ್ಲಾಳಿಗಳು ಅಥವಾ ಮಧ್ಯವರ್ತಿಗಳಿಲ್ಲದೆ ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡಿ ರೈತರಿಗೆ ನೇರವಾಗಿ ಹಣ ದೊರಕುವ ಸೌಲಭ್ಯ ಕಲ್ಪಿಸಲಾಗಿದೆ ಎಂದರು.

Advertisement

ಡಾ| ಸಂತೋಷ ಎಚ್‌.ಎಂ., ಕುಮದ್ವತಿ ತೋಟಗಾರಿಕಾ ರೈತ ಉತ್ಪಾದಕ ಕಂಪನಿಯ ಚೇರ್‌ಮನ್‌ ಬಸವನಗೌಡ ಯಡಗೋಡಿ, ಪ್ರಗತಿಪರ ರೈತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next