Advertisement

ಕೃಷಿಗೆ ದೀರ್ಘಾವಧಿ ಪರಿಹಾರ ಬೇಕು; ಸಾಲ ಮನ್ನಾ ಅಲ್ಲ: ನಾಯ್ಡು

05:06 PM Nov 15, 2018 | Team Udayavani |

ಮುಂಬಯಿ : ದೇಶದ ಕೃಷಿ ರಂಗಕ್ಕೆ ಬೇಕಿರುವುದು ದೀರ್ಘಾವಧಿಯ ಪರಿಹಾರವೇ ಸಾಲ ಮನ್ನಾ ರೂಪದ ತಾತ್ಕಾಲಿಕ ಪರಿಹಾರ ಅಲ್ಲ ಎಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ.

Advertisement

ಲಕ್ಷ್ಮಣರಾವ್‌ ಇನಾಮ್‌ದಾರ್‌ ಸ್ಮರಣಾರ್ಥ ಉಪನ್ಯಾಸ ನೀಡುತ್ತಿದ್ದ ಅವರು, ಕೃಷಿ ರಂಗಕ್ಕೆ ಮೂಲ ಸೌಕರ್ಯದ ಬೆಂಬಲ ಬೇಕಾಗಿದೆ ಮತ್ತು ಅತೀ ಅಗ್ಗದ ಸಾಲ ಸೌಕರ್ಯ ಬೇಕಾಗಿದೆ ಎಂದು ಹೇಳಿದರು. 

ದೇಶದ ಔದ್ಯಮಿಕ ಮತ್ತು ತಂತ್ರಜ್ಞಾನ ರಂಗ ಅಪಾರ ಬದಲಾವಣೆಯನ್ನು ಕಾಣುತ್ತಿದ್ದು ಅದಕ್ಕೆ ತಕ್ಕಂತೆ ಸಹಕಾರಿ ಸಂಘ ಸಂಸ್ಥೆಗಳನ್ನು ಸದೃಢ ಮತ್ತು ಕಾರ್ಯಸಾಧ್ಯ ರೀತಿಯಲ್ಲಿ ಪುನರ್‌ ರೂಪಿಸಬೇಕಾಗಿದೆ; ಇದಕ್ಕಾಗಿ ಈಗಿರುವ ಕಾನೂನುಗಳಿಗೆ ಬದಲಾವಣೆ ತರಬೇಕಾಗಿದೆ ಎಂದು ನಾಯ್ಡು ಹೇಳಿದರು. 

1979ರಲ್ಲಿ ಸಹಕಾರ ಭಾರತಿ ಸ್ಥಾಪಿಸುವುದಕ್ಕೆ ಕಾರಣೀಭೂತರಾಗಿದ್ದ ಲಕ್ಷ್ಮಣರಾವ್‌ ಇನಾಮ್‌ದಾರ್‌ ಅವರ ಜನ್ಮ ಶತಮಾನೋತ್ಸವದ ಪ್ರಯುಕ್ತ ಮುಂಬಯಿ ವಿಶ್ವವಿದ್ಯಾಲಯ ಏರ್ಪಡಿಸಿದ್ದ ಸಂಸ್ಮರಣ ಉಪನ್ಯಾಸ ಕಾರ್ಯಕ್ರಮದಲ್ಲಿ ನಾಯ್ಡು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next