Advertisement

ಅನಿಲ ಪೂರೈಕೆ-ಸಾಗಣೆಗೆ ಜಿಎಐಎಲ್‌ ಜತೆ ಒಪ್ಪಂದ

11:15 AM Jun 25, 2017 | Team Udayavani |

ಬೆಂಗಳೂರು: ಯಲಹಂಕ ಅನಿಲ ಆಧಾರಿತ ವಿದ್ಯುತ್‌ ಸ್ಥಾವರಕ್ಕೆ ಅನಿಲ ಪೂರೈಕೆ ಮತ್ತು ಸಾಗಣೆ ಸಂಬಂಧ ಕರ್ನಾಟಕ ವಿದ್ಯುತ್‌ ನಿಗಮ (ಕೆಪಿಸಿಎಲ್‌) ಹಾಗೂ ಗ್ಯಾಸ್‌ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್‌ (ಜಿಎಐಎಲ್‌) ನಡುವೆ ಶನಿವಾರ ಒಡಂಬಡಿಕೆ ಏರ್ಪಟ್ಟಿತು.

Advertisement

ನಗರದ ರೇಸ್‌ಕೋರ್ಸ್‌ ರಸ್ತೆಯಲ್ಲಿರುವ ಕೆಪಿಸಿಎಲ್‌ ಕಚೇರಿಯಲ್ಲಿ ಶನಿವಾರ ನಡೆದ ಆಡಳಿತ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಎರಡೂ ಸಂಸ್ಥೆಗಳು ಒಪ್ಪಂದಕ್ಕೆ ಸಹಿ ಹಾಕಿದವು. ನಿಗಮದ ಪರವಾಗಿ ಮುಖ್ಯ ಎಂಜಿನಿಯರ್‌ ಡಿ.ಚಂದ್ರಕಾಂತ್‌ (ಜಿ.ಎಸ್‌.ಡಬ್ಲೂé) ಹಾಗೂ ಜಿಎಐಎಲ್‌ ಪರವಾಗಿ ಉಪ ಪ್ರಧಾನ ವ್ಯವಸ್ಥಾಪಕ (ಮಾರ್ಕೆಟಿಂಗ್‌) ಸುಮಿತ್‌ ಕಿಶೋರ್‌  ಒಪ್ಪಂದಕ್ಕೆ ಸಹಿ ಹಾಕಿದರು.

ಇಂಧನ ಸಚಿವ ಡಿ.ಕೆ.ಶಿವಕುಮಾರ್‌, ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ರಜನೀಶ್‌ ಗೋಯೆಲ್‌, ಕೆಪಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಜಿ.ಕುಮಾರ ನಾಯಕ್‌, ಜಿಎಐಎಲ್‌ನ ನಿರ್ದೇಶಕ (ಮಾರ್ಕೆಟಿಂಗ್‌) ಗಜೇಂದ್ರ ಸಿಂಗ್‌, ಕಾರ್ಯಕಾರಿ ನಿರ್ದೇಶಕ (ಮಾರ್ಕೆಟಿಂಗ್‌) ಮನೋಜ್‌ ಜೈನ್‌ ಇತರರು ಉಪಸ್ಥಿತರಿದ್ದರು.

ಯಲಹಂಕ ಅನಿಲ ಆಧಾರಿತ ವಿದ್ಯುತ್‌ ಸ್ಥಾವರಕ್ಕೆ 15 ವರ್ಷಗಳ ಅವಧಿಗೆ ನಿತ್ಯ 11 ಎಂಎಂಎಸ್‌ಸಿಎಂ ನಂತೆ ಅನಿಲ ಸರಬರಾಜು ಹಾಗೂ ಸಾಗಣೆ ಮಾಡುವ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಜಿಎಐಎಲ್‌ 2018ರ ಮಾರ್ಚ್‌ನೊಳಗೆ ಅನಿಲ ಪೂರೈಕೆ ಆರಂಭಿಸುವ ನಿರೀಕ್ಷೆ ಇದ್ದು, ಮುಂದಿನ ಮಾರ್ಚ್‌ನಿಂದ ವಿದ್ಯುತ್‌ ಉತ್ಪಾದನೆ ಆರಂಭವಾಗುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next