Advertisement

ಮತ್ತೆ ಕಲಘಟಗಿಯಿಂದಲೇ ಸ್ಪರ್ಧಿಸುವೆ: ಸಂತೋಷ ಲಾಡ್‌

06:55 PM Jul 11, 2021 | Team Udayavani |

ಬಳ್ಳಾರಿ: ಕಳೆದ ಬಾರಿ ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಂಡು ಇದೀಗ ಕಲಘಟಗಿಯಲ್ಲೇ ಉಳಿಯುವ ಮೂಲಕ ಕ್ಷೇತ್ರದ ಜನರಿಗೆ ಹತ್ತಿರವಾಗುತ್ತೇನೆ. ಮತ್ತೆ ಕಲಘಟಗಿಯಿಂದಲೇ ಸ್ಪರ್ಧಿಸುತ್ತೇನೆ ಎಂದು ಮಾಜಿ ಸಚಿವ ಸಂತೋಷ್‌ ಲಾಡ್‌ ಹೇಳಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಕಾಂಗ್ರೆಸ್‌ ಸರ್ಕಾರದ ಅವಧಿ ಯಲ್ಲಿ ಕಲಘಟಗಿ ಕ್ಷೇತ್ರದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲಾಗಿಲ್ಲ. ಆಗ ಸಚಿವ ಸ್ಥಾನ ನೀಡಿ ಬಳ್ಳಾರಿ ಜಿಲ್ಲೆ ಉಸ್ತುವಾರಿ ವಹಿಸಿಕೊಂಡಿದ್ದರಿಂದ ಕಲಘಟಗಿ ಕ್ಷೇತ್ರದ ಬಗ್ಗೆ ಹೆಚ್ಚು ಗಮನ ಹರಿಸಲಾಗಿಲ್ಲ. 2013ರಲ್ಲಿ ನನ್ನ ಸೋಲಿಗೂ ಅದೇ ಕಾರಣವಿರಬಹುದು. ಇದೀಗ ಹಿಂದೆ ನಡೆದಿರುವ ತಪ್ಪುಗಳನ್ನು ಅರಿತು ಸರಿಪಡಿಸಿಕೊಂಡು ಕ್ಷೇತ್ರದಲ್ಲೇ ಉಳಿದುಕೊಳ್ಳುವ ಮೂಲಕ ಅಲ್ಲಿನ ಜನರಿಗೆ ಹತ್ತಿರವಾಗುತ್ತೇನೆ.

ರಾಜಕೀಯವಾಗಿ ನಾನು ಕಲಘಟಗಿ ಕ್ಷೇತ್ರದತ್ತ ಆಸಕ್ತಿ ವಹಿಸಿದ್ದು ಅಲ್ಲಿಂದಲೇ ಸ್ಪರ್ಧೆ ಮಾಡುತ್ತೇನೆ. ನನ್ನ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಕಲಘಟಗಿ ಬ್ಲಾಕ್‌ ಅಧ್ಯಕ್ಷರ ನೇಮಕ ವಿಚಾರದಲ್ಲಿ ಸ್ಪಲ್ಪ ಗೊಂದಲವಿತ್ತಾದರೂ ಅದನ್ನು ಡಿ.ಕೆ.ಶಿವಕುಮಾರ್‌ ಅವರೇ ಸರಿಪಡಿಸಿದ್ದಾರೆ. ನನಗೆ ಪ್ರತಿಸ್ಪರ್ಧಿಯಾಗಿ ನಾಗರಾಜ್‌ ಛಬ್ಬಿ ಅವರನ್ನು ಬೆಳೆಸುತ್ತಾರೆ ಎಂಬುದು ಸರಿಯಲ್ಲ. ಪಕ್ಷ ಎಲ್ಲರಿಗೂ ಅವಕಾಶ ಕಲ್ಪಿಸುವ ಕೆಲಸ ಮಾಡಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next