Advertisement

ನನ್ನ ವಿರುದ್ಧ ಗೆದ್ದು ತೋರಿಸಿ

06:00 AM Aug 10, 2018 | Team Udayavani |

ಹೊಸದಿಲ್ಲಿ: “ತಾಕತ್ತಿದ್ದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮುಂಬೈ ಕ್ಷೇತ್ರದಲ್ಲಿ ನನ್ನ ವಿರುದ್ಧ ಗೆದ್ದು ತೋರಿಸಿ’ ಹೀಗೆಂದು ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೇಂದ್ರ ಸಚಿವ ಪಿಯೂಷ್‌ ಗೋಯಲ್‌ ಸವಾಲು ಹಾಕಿದ್ದಾರೆ. 

Advertisement

ಲೋಕ ಸಭಾ ಕಲಾಪದ ವೇಳೆ, “”ಗೋಯೆಲ್‌ಗೆ ಸ್ವಂತ ಬಲದಲ್ಲಿ ಚುನಾ ವಣೆ ಗೆಲ್ಲುವ ಅರ್ಹತೆಯಿಲ್ಲ. ಈಗಲೂ ರಾಜ್ಯಸಭಾ ಸದಸ್ಯರಾಗಿ, ಆ ಮೂಲಕ ಸಚಿವರಾಗಿದ್ದಾರೆ” ಎಂದು ಖರ್ಗೆ ಛೇಡಿಸಿ ದರು. ಇದಕ್ಕೆ ಪ್ರತಿಕ್ರಿಯಿಸಿದ  ಗೋಯೆಲ್‌, “”ಹಾಗಾದರೆ, ಮುಂದಿನ ಚುನಾವಣೆಯಲ್ಲಿ ಮುಂಬೈನಲ್ಲಿ ನಿಮ್ಮ ವಿರುದ್ಧವೇ ನಿಂತು ಗೆಲ್ಲುತ್ತೇನೆ” ಎಂಬ ಸವಾಲು ಹಾಕಿದರು. ಇದೇ ವೇಳೆ, ಸಚಿವ ಅನಂತ್‌ಕುಮಾರ್‌ ಅವರೂ ಖರ್ಗೆ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದು, ಖರ್ಗೆ ಅವರಿಗೆ ಅಂಬೇಡ್ಕರ್‌ ಬರೆದಿರುವ ಸಂವಿಧಾನದ ಪ್ರಾಥಮಿಕ ಜ್ಞಾನದ ಕೊರತೆಯಿದೆ. ಭಾರತದ ಯಾವುದೇ ಪ್ರಜೆ ಸಂಸತ್ತಿನ ಎರಡೂ ಸದನಗಳಿಗೂ ಹಾಗೂ ವಿಧಾನಸಭೆ, ಪರಿಷತ್‌ಗೂ ಸದಸ್ಯರಾಗ ಬಹುದು ಎಂದು ಕಿಡಿಕಾರಿದರು.
 

Advertisement

Udayavani is now on Telegram. Click here to join our channel and stay updated with the latest news.

Next