Advertisement

ಚುನಾವಣೆ ಬಳಿಕ ಬೊಮ್ಮಾಯಿಗೂ ಶಟ್ಟರ್, ಸವದಿ ಪರಿಸ್ಥಿತಿ :ಎಂ.ಬಿ.ಪಾಟೀಲ್

10:54 PM Apr 17, 2023 | Team Udayavani |

ವಿಜಯಪುರ: ವಿಧಾನಸಭೆ ಮತದಾನ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜಕೀಯ ಪರಿಸ್ಥಿತಿ ಶಟ್ಟರ ಹಾಗೂ ಸವದಿ ಅವರಿಗೆ ಆದಂತೆ ರಾಜಕೀಯ ಪರಿಸ್ಥಿತಿ ಎದುರಿಸಲಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿರಿ ಅಧ್ಯಕ್ಷ ಎಂ.ಬಿ.ಪಾಟೀಲ ಭವಿಷ್ಯ ನುಡಿದಿದ್ದಾರೆ.

Advertisement

ಸೋಮವಾರ ತಮ್ಮ ತವರು ಕ್ಷೇತ್ರ ಬಬಲೇಶ್ವರದಲ್ಲಿ ನಾಮಪತರ ಸಲ್ಲಿಸಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಚುನಾವಣೆ ಬಳಿಕ ಬೊಮ್ಮಾಯಿ ಅವರು ಮಾತ್ರವಲ್ಲ ಬಿಜೆಪಿ ಇತರೆ ನಾಯಕರ ಪರಿಸ್ಥಿತಿ ಎನಾಗಲಿದೆ ಅಂತಾ ನಿಮಗೂ ಗೊತ್ತಾಗಲಿದೆ ಎಂದು ಪತ್ರಕರ್ತರಿಗೆ ಹೇಳಿದರು.

ಲಕ್ಷ್ಮಣ ಸವದಿ, ಜಗದೀಶ್ ಶೆಟ್ಟರ ಅವರಿಗಾದ ಪರಿಸ್ಥಿತಿ ಬೊಮ್ಮಾಯಿಗೆ ಆಗುತ್ತದೆ.ಬೇಕಾದರೆ ಬರೆದಿಟ್ಟುಕೊಳ್ಳಿ,. ಚುನಾವಣೆ ಬಳಿಕ ಎಲ್ಲರಿಗೂ ಗೊತ್ತಾಗುತ್ತದೆ ಎಂದರು.

ಬಿಜೆಪಿಯಲ್ಲಿ ಲಿಂಗಾಯತ ನಾಯಕರನ್ನ ಸೈಡಲೈನ್ ಮಾಡಲಾಗುತ್ತಿದೆ ಮೊದಲು ಯಡಿಯೂರಪ್ಪ ಅವರಿಂದ ಅಧಿಕಾರ ಕಸಿದುಕೊಂಡ ಬಿಜೆಪಿ ಹೈಕಮಾಂಡ್ ಬಳಿಕ ಲಕ್ಷ್ಮಣ್ ಸವದಿ, ಜಗದೀಶ್ ಶೆಟ್ಟರ್ ಅವರನ್ನು ಮೂಲೆಗುಂಪು ಮಾಡಿದ್ದಾರೆ ಚುನಾವಣೆ ಬಳಿಕ ಬೊಮ್ಮಾಯಿ ಅವರಿಗೂ ಇದೇ ಪರಿಸ್ಥಿತಿ ಬರುವುದು ಖಚಿತ ಎಂದರು.

ಬಿಜೆಪಿ ಹೈಕಮಾಂಡ ನಾಯಕರ ಹಿಡನ್ ಅಜಂಡಾ ಬೇರೆಯೇ ಇದೆ.ಮಾಜಿ ಸಿಎಂ ಕುಮಾರಸ್ವಾಮಿ ಅವರು ಹೇಳಿದಂತೆ ಬಿಜೆಪಿ ಹಿಡನ್ ಅಜೆಂಡಾ ಬೇರೆ ಇದೆ. ಲಿಂಗಾಯತ ನಾಯಕರನ್ನ ವ್ಯವಸ್ಥಿತವಾಗಿ ಮುಗಿಸಲಾಗುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ಲಿಂಗಾಯತ ನಾಯಕರು ಬಂದಿರೋದು ಪ್ಲಸ್ ಪಾಯಿಂಟ್ ಆಗಲಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next