Advertisement

E.D: ಚೇಸಿಂಗ್‌ ಬಳಿಕ ಇ.ಡಿ. ಅಧಿಕಾರಿ ಸೆರೆ

12:17 AM Dec 02, 2023 | Team Udayavani |

ಚೆನ್ನೈ: ವೈದ್ಯರೊಬ್ಬರಿಂದ ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಯನ್ನು ತಮಿಳುನಾಡು ಜಾಗೃತ ದಳ ಮತ್ತು ಭ್ರಷ್ಟಾಚಾರ ವಿರೋಧಿ (ಡಿವಿಎಸಿ) ದಳದ ಅಧಿಕಾರಿಗಳು ಬಂಧಿಸಿದ್ದಾರೆ.

Advertisement

ಒಟ್ಟು ಎಂಟು ಕಿ.ಮೀ. ಅವರನ್ನು ಬೆನ್ನತ್ತಿದ ಬಳಿಕ ಅಂಕಿತ್‌ ತಿವಾರಿ ಎಂಬ ಹೆಸರಿನ ಆ ಅಧಿಕಾರಿಯನ್ನು ವಶಕ್ಕೆ ಪಡೆದು ಬಂಧಿಸಲಾಯಿತು. ದಿಂಡಿಗಲ್‌ನಲ್ಲಿ ವೈದ್ಯರ ನಿವಾಸದಲ್ಲಿಯೇ 20 ಲಕ್ಷ ರೂ. ಲಂಚದ ಹಣದ ಸಮೇತ ಅವರನ್ನು ಬಂಧಿಸಲಾಯಿತು. ಮಧುರೈಗೆ ಅವರನ್ನು ಕರೆತರುತ್ತಿದ್ದಾಗ ವಾಹನದಲ್ಲಿ ಪರಾರಿಯಾದರು. ವೈದ್ಯರ ವಿರುದ್ಧ ದಾಖಲಾಗಿದ್ದ ಅಕ್ರಮ ಸಂಪತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿ ಲಂಚ ಕೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next