Advertisement

ಕಾನ್ಶಿರಾಮ್‌ ಸ್ಮಾರಕವಾಗಿ ಮಾಯಾವತಿ ನಿವಾಸ ಬದಲು

06:00 AM May 22, 2018 | |

ಲಕ್ನೋ: ಉತ್ತರ ಪ್ರದೇಶದ ಮಾಜಿ ಸಿಎಂಗಳು ಸರ್ಕಾರಿ ಬಂಗಲೆ ತೆರವುಗೊಳಿಸಬೇಕು ಎಂದು ಸುಪ್ರೀಂಕೋರ್ಟ್‌ ಆದೇಶ ನೀಡಿದ್ದರೂ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿಗಳಾದ ಮಾಯಾವತಿ ಮತ್ತು ಅಖೀಲೇಶ್‌ ಯಾದವ್‌ ಇನ್ನೂ ಅದೇ ಬಂಗಲೆಗಳಲ್ಲಿ ಉಳಿದುಕೊಂಡಿದ್ದಾರೆ.

Advertisement

ಬಹುಜನ ಸಮಾಜ ಪಕ್ಷವು ಮಾಯಾವತಿ ಅವರು ವಾಸಿಸುತ್ತಿರುವ ಅಧಿಕೃತ ಬಂಗಲೆಯನ್ನು ಬಿಎಸ್‌ಪಿ ಸಂಸ್ಥಾಪಕ ಕಾನ್ಶಿರಾಮ್‌ರ ಸ್ಮಾರಕ ಎಂದು ಘೋಷಿಸಿದೆ. ಬಂಗಲೆ ಮುಂದೆ ಒಂದು ಬೋರ್ಡ್‌ ಅನ್ನೂ ಹಾಕಲಾಗಿದೆ. ಇದೇ ವೇಳೆ, ಮಾಯಾ ಅವರು ಹೊಸ ಬಂಗಲೆಗೆ ವಾಸ್ತವ್ಯ ಬದಲಿಸಿಕೊಳ್ಳಲು ಮುಂದಾಗಿ ದ್ದಾರೆ. 2010ರಲ್ಲಿ  ಖರೀದಿಸಿದ್ದ 15 ಕೋಟಿ ರೂ. ಮೌಲ್ಯದ ಬಂಗಲೆಯಲ್ಲಿ ವಾಸಿಸಲಿದ್ದಾರೆ. .

ಇನ್ನು ಅಖೀಲೇಶ್‌ ಯಾದವ್‌ ತಮಗಿರುವ ಭದ್ರತಾ ವ್ಯವಸ್ಥೆಯಿಂದಾಗಿ ಹಾಲಿ ಮನೆ ತೆರವಿಗೆ 2 ವರ್ಷಗಳ ಸಮಯ  ಬೇಕೆಂದು ಕೋರಿದ್ದಾರೆ. ಈ ಬಗ್ಗೆ ಉ.ಪ. ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಝೆಡ್‌ ಪ್ಲಸ್‌ ಮತ್ತು ಎನ್‌ಎಸ್‌ಜಿ ಭದ್ರತೆ ಇರುವುದರಿಂದ ಅವರಿಗೂ ಸೂಕ್ತ ವ್ಯವಸ್ಥೆ, ಸ್ಥಳಾವಕಾಶ ಬೇಕು ಎಂದು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next