Advertisement

ಪ್ರಸಾದ ವಿವಾದ: ಮತ್ತೊಂದು ಅರ್ಜಿ ಸಲ್ಲಿಕೆ

01:16 AM Nov 23, 2021 | Team Udayavani |

ಕೊಚ್ಚಿ: ಶಬರಿಮಲೆ ಅಯ್ಯಪ್ಪ ದೇಗುಲದ ಪ್ರಸಾದ, ಅರವಣ, ಅಪ್ಪ ಪ್ರಸಾದ ಸಿದ್ಧ ಪಡಿಸಲು ಹಲಾಲ್‌ ಪ್ರಮಾಣೀಕೃತ ಬೆಲ್ಲ ಬಳಕೆ ಮಾಡಲಾಗುತ್ತಿದೆ ಎಂಬ ವಿಚಾರದಲ್ಲಿ ಮುಖ್ಯ ಅರ್ಚಕರ ಅಭಿಪ್ರಾಯ ಕೇಳಬೇಕು ಎಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

Advertisement

ಈ ಬಗ್ಗೆ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸುವು ದಾಗಿ ಸೋಮವಾರ ತಿಳಿಸಿದೆ.

ಶಬರಿಮಲೆ ಕರ್ಮ ಸಮಿತಿಯ ಎಸ್‌.ಜೆ.ಆರ್‌.ಕುಮಾರ್‌ ಅವರೇ ಬಗ್ಗೆ ಮನವಿ ಮಾಡಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ ಅವರು ಹಲಾಲ್‌ ಪ್ರಮಾಣೀಕೃತ ಬೆಲ್ಲದ ವಿರುದ್ಧ ತಕರಾರು ಅರ್ಜಿ ಸಲ್ಲಿಸಿದ್ದರು.

ನ.18 ರಂದು ನಡೆದಿದ್ದ ವಿಚಾರಣೆ ವೇಳೆ, ಟಿಡಿಬಿ, ಶಬರಿಮಲೆಯಲ್ಲಿನ ವಿಶೇಷ ಆಯುಕ್ತರಿಗೆ ನೋಟಿಸ್‌ ನೀಡಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next