Advertisement

ಸಿಧು ಪಂಜಾಬ್‌ನಲ್ಲಿ ಸೋತ ಬೆನ್ನಲ್ಲೇ ಟ್ವಿಟರ್‌ನಲ್ಲಿ ಟ್ರೆಂಡ್ ಆದ ಅರ್ಚನಾ!

09:13 PM Mar 10, 2022 | Team Udayavani |

ನವದೆಹಲಿ : ಕ್ರಿಕೆಟಿಗ ಮತ್ತು ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರ ಸೋಲಿನ ನಂತರ, ಸಾಮಾಜಿಕ ಮಾಧ್ಯಮವು ಅರ್ಚನಾ ಪುರನ್ ಸಿಂಗ್ ಈಗ ಚಿಂತಿತ ಮಹಿಳೆ ಎಂದು ಹೇಳುವ ಟ್ವೀಟ್‌ಗಳು ಮತ್ತು ಪೋಸ್ಟ್ ಗಳು ಸಾಮಾಜಿಕ ತಾಣಗಳಲ್ಲಿ ತುಂಬಿ ಹೋಗಿದೆ.

Advertisement

ಇದಕ್ಕೆ ಕಾರಣ?

ಅರ್ಚನಾ ಈಗ ‘ದಿ ಕಪಿಲ್ ಶರ್ಮಾ ಶೋ’ ನ ಭಾಗವಾಗಿದ್ದು, ಈ ಹಿಂದೆ ಸಿಧು ಅವರು ಆಕ್ರಮಿಸಿಕೊಂಡಿದ್ದ ಕುರ್ಚಿಯಲ್ಲಿ ಅವರು ಕುಳಿತಿದ್ದಾರೆ.
ಜನರು ಕಪಿಲ್ ಶರ್ಮಾ ಶೋನಲ್ಲಿ ಸಿಧು ತನ್ನ ಸ್ಥಾನವನ್ನು ಪಡೆದುಕೊಳ್ಳುತ್ತಾರೆಯೇ ಎಂದು ಅರ್ಚನಾ ಚಿಂತಿತರಾಗಿದ್ದಾರೆ ಎಂದು ಹಲವಾರು ಮಂದಿ ಹಾಸ್ಯಮಯವಾಗಿ ಟ್ವೀಟ್ ಮಾಡಿ ಪೋಸ್ಟ್ ಗಳನ್ನು ವೈರಲ್ ಮಾಡಿದ್ದಾರೆ.

2019 ರಲ್ಲಿ ನಡೆದ ‘ದಿ ಕಪಿಲ್ ಶರ್ಮಾ ಶೋ’ ನಲ್ಲಿ ನವಜೋತ್ ಸಿಂಗ್ ಸಿಧು ಬದಲಿಗೆ ಅರ್ಚನಾ ಬಂದಿದ್ದರು. ಪುಲ್ವಾಮಾ ಭಯೋತ್ಪಾದಕ ದಾಳಿಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ನಂತರ ಸಿಧು ಅವರನ್ನು ಕಪಿಲ್ ಅವರ ಶೋನಿಂದ ತೆಗೆದುಹಾಕಲಾಯಿತು ಎಂದು ಹೇಳಲಾಗುತ್ತದೆ. ನಂತರ ಅವರ ಸ್ಥಾನವನ್ನು ಅರ್ಚನಾ ಪುರನ್ ಸಿಂಗ್ ಅವರು ತುಂಬಿದ್ದಾರೆ. ಈಗ ಆ ಜಾಗಕ್ಕೆ ಮತ್ತೆ ಸಿಧು ಬರಲಿದ್ದಾರೆಯೇ ಎನ್ನುವ ಚರ್ಚೆ ಆರಂಭವಾಗಿದೆ.

ಸಿಧು ಅವರು ಪೂರ್ವ ಅಮೃತಸರ ಕ್ಷೇತ್ರದಿಂದ ಸೋತಿದ್ದಾರೆ. ರಾಜಕೀಯ ಧುರೀಣರಾದ ನವಜೋತ್ ಸಿಂಗ್ ಸಿಧು ಮತ್ತು ಬಿಕ್ರಮ್ ಸಿಂಗ್ ಮಜಿಥಿಯಾ ನಡುವೆ ಹಣಾಹಣಿ ನಡೆಯಲಿದೆ ಎಂದು ಬಹುತೇಕರು ಭಾವಿಸಿದ್ದರೆ ಅಲ್ಲಿ ಎಎಪಿಯ ಜೀವನ್ ಜ್ಯೋತ್ ಕೌರ್ ಅವರು ಗೆದ್ದಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next