Advertisement

ದಸರಾ ನಂತರ ಎಲ್ಲರಿಗೂ ಪೂರ್ಣ ತರಗತಿ ಜತೆಗೆ ಬಿಸಿಯೂಟ ಲಭ್ಯ

02:58 PM Oct 05, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ದಸರಾ ರಜೆಯ ನಂತರ 1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೂ ಭೌತಿಕ ತರಗತಿ ಆರಂಭದ ಜತೆಗೆ ಎಲ್ಲ ವಿದ್ಯಾರ್ಥಿಗಳಿಗೂ (1ರಿಂದ 10) ಬಿಸಿಯೂಟವೂ ಸಿಗಲಿದೆ.

Advertisement

ಅ.10ರಿಂದ 20ರವರೆಗೆ ದಸರಾ ರಜೆ ಇರಲಿದೆ. ಈಗಾಗಲೇ ಸರ್ಕಾರ 6ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಪೂರ್ಣ ಪ್ರಮಾಣದಲ್ಲಿ ತರಗತಿ ಆರಂಭಿಸಿದೆ. ಆದರೆ, ಬಿಸಿಯೂಟ ಆರಂಭ ಮಾಡಿಲ್ಲ. ಹೀಗಾಗಿ ದಸರಾ ರಜೆ ಮುಗಿಯುತ್ತಿದ್ದಂತೆ 1ರಿಂದ 5ನೇ ತರಗತಿಯ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಯ ಜತೆ ಜತೆಗೆ ಎಲ್ಲ ವಿದ್ಯಾರ್ಥಿಗಳಿಗೂ ಬಿಸಿಯೂಟ ವನ್ನು ಶಾಲೆಯಲ್ಲೇ ನೀಡಲಿದೆ.

ಕೊರೊನಾ ಆರಂಭವಾದಾಗಿನಿಂದ (2020 ಮಾರ್ಚ್‌) ಶಾಲೆಗಳಲ್ಲಿ ಭೌತಿಕ ತರಗತಿ ಸ್ಥಗಿತಗೊಂಡಿರುವ ಜತೆಗೆ ಬಿಸಿ ಯೂಟ ನೀಡುವುದನ್ನೂ ನಿಲ್ಲಿಸಲಾಗಿತ್ತು.
ಬಿಸಿಯೂಟದ ಬದಲಿಗೆ ಆಹಾರ ಧಾನ್ಯವನ್ನು ಮಕ್ಕಳಿಗೆ ವಿತರಣೆ ಮಾಡಲಾಗುತ್ತಿತ್ತು. ಈಗ ಕೊರೊನಾ ಪ್ರಕರಣ ಕಡಿಮೆಯಾಗುವ ಜತೆಗೆ 3ನೇ ಅಲೆಯ ಆತಂಕವೂ ಕ್ಷೀಣಿಸಿರುವುದರಿಂದ ಶಾಲೆಗಳಲ್ಲಿ ಭೌತಿಕ ತರಗತಿ ಆರಂಭದ ಜತೆ ಜತೆಗೆ ಬಿಸಿಯೂಟ ನೀಡಲು ಸರ್ಕಾರ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಶಾಲೆಗಳಿಗೆ ಸೂಚನೆ: ದಸರಾ ರಜೆ ಮುಗಿದ ತಕ್ಷಣದಿಂದ ಎಲ್ಲ ವಿದ್ಯಾರ್ಥಿಗಳಿಗೂ ತರಗತಿ ಆರಂಭವಾಗುವ ಜತೆಗೆ ಬಿಸಿಯೂಟವೂ ನೀಡಬೇಕಾಗಿದೆ. ಹೀಗಾಗಿ ಕೊರೊನಾ ತಡೆ ಸಂಬಂಧಿಸಿದಂತೆ ಈಗಾಗಲೇ ನೀಡಿರುವ ಎಸ್‌ ಒಪಿಯನ್ನು ಅತ್ಯಂತ ವ್ಯವಸ್ಥಿತವಾಗಿ ಪಾಲಿಸಿಕೊಂಡು, ಬಿಸಿ ಯೂಟ ನೀಡಬೇಕಿದೆ. ಇದಕ್ಕೆ ಬೇಕಾದ ಸಿದ್ಧತೆಯನ್ನು ಈಗಿಂದಲೇ ಆರಂಭಿಸಿಕೊಳ್ಳಬೇಕು. ಬಿಸಿಯೂಟ ಸಿದ್ಧಪಡಿಸಿರುವ ಕೊಠಡಿಯ ಸ್ವಚ್ಛತೆ, ಬಿಸಿಯೂಟ ವಿತರಣೆಗೆ ಬೇಕಾದ ವ್ಯವಸ್ಥೆ ಸೇರಿ ದಂತೆ ಎಲ್ಲವನ್ನೂ ಸಮರ್ಪಕ ರೀತಿಯಲ್ಲಿ ಸಿದ್ಧಪಡಿಸಿ ಕೊಳ್ಳುವಂತೆ ಶಾಲೆಗಳಿಗೆ ಸೂಚನೆ ನೀಡಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಮಾಹಿತಿ ನೀಡಿದರು.

ಭೌತಿಕ ತರಗತಿ ಆರಂಭದ ಜತೆಗೆ ಬಿಸಿಯೂಟವನ್ನು ಶಾಲೆಯಲ್ಲೇ ಒದಗಿಸುವಂತೆ ಮಾಜಿ ಸಚಿವ ಸುರೇಶ್‌ ಕುಮಾರ್‌ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ, ಮನವಿ ಸಲ್ಲಿಸಿದ್ದರು. ಹಾಗೆಯೇ 1ನೇ ತರಗತಿಯಿಂದಲೇ ಭೌತಿಕ ತರಗತಿ ಆರಂಭಿಸಲು ಸರ್ಕಾರವೂ ಉತ್ಸುಕವಾಗಿ ರುವುದರಿಂದ ಶೀಘ್ರವೇ ಈ ಎರಡು ನಿರ್ಧಾರಗಳು ಹೊರಬೀಳಲಿದೆ ಎಂದು ಹೇಳಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next