Advertisement

Money: ಭತ್ತ ನೀಡಿದ ರೈತನ ಖಾತೆಗೆ 7 ತಿಂಗಳ ಅನಂತರ ಹಣ ಜಮಾ

01:17 AM Sep 21, 2023 | Team Udayavani |

ಉಡುಪಿ: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಸರಕಾರಕ್ಕೆ ಕುಚ್ಚಲು ಅಕ್ಕಿಗೆ ಪೂರಕ ವಾಗುವ ಭತ್ತ ನೀಡಿದ ರೈತನಿಗೆ ಕೊನೆಗೂ ಸರಕಾರದಿಂದ ಹಣ ಬಂತು. ಭತ್ತ ನೀಡಿ ಸುಮಾರು 7 ತಿಂಗಳ ಬಳಿಕ ರೈತನ ಖಾತೆಗೆ ಸರಕಾರದಿಂದ ಹಣ ಸಂದಾಯವಾಗಿದೆ.

Advertisement

ಉಡುಪಿ ಜಿಲ್ಲೆಯ ಕುಕ್ಕೆಹಳ್ಳಿ ಗ್ರಾಮದ ರೈತರೊಬ್ಬರು 31 ಕ್ವಿಂಟಾಲ್‌ ಭತ್ತವನ್ನು ಉಡುಪಿ ಎಪಿಎಂಸಿ ಖರೀದಿ ಕೇಂದ್ರದ ಮೂಲಕ ರಾಜ್ಯ ಆಹಾರ ನಿಗಮಕ್ಕೆ ನೀಡಿದ್ದರು. 31 ಕ್ಟಿಂಟಾಲ್‌ಗೆ 78,926 ರೂ. ಸರಕಾರದಿಂದ ಪಾವತಿಯಾಗಬೇತ್ತು. ಈ ಬಗ್ಗೆ “ಉದಯವಾಣಿ’ ಸೆ. 17ರಂದು “ಸರಕಾರಕ್ಕೆ ಭತ್ತ ಕೊಟ್ಟ ರೈತನಿಗೆ ಹಣ ಬಂದಿಲ್ಲ’ ಎಂಬ ಶೀರ್ಷಿಕೆಯಡಿ ವಿಸ್ತೃತ ವರದಿ ಪ್ರಕಟಿಸಿತ್ತು.

ಅಧಿಕಾರಿ ಗಳು ತಾಂತ್ರಿಕ ಸಮಸ್ಯೆ ಬಗೆಹರಿಸಿ ರೈತನ ಖಾತೆಗೆ ಪೂರ್ತಿ ಹಣ ಜಮಾ ಮಾಡಿಸಿದ್ದಾರೆ.

ಕನಿಷ್ಠ ಬೆಂಬಲ ಬೆಲೆಯಡಿ ಭತ್ತ ಖರೀದಿಸಿದ ಸರಕಾರ ಅದಕ್ಕೆ ಸರಿಯಾದ ಹಣ 7 ತಿಂಗಳಾದರೂ ರೈತನಿಗೆ ನೀಡಿರಲಿಲ್ಲ. ಈ ಬಗ್ಗೆ ರೈತ ಖುದ್ದು ಕೇಂದ್ರ ಕೃಷಿ (ರಾಜ್ಯಖಾತೆ) ಸಚಿವೆ ಶೋಭಾ ಕರಂದ್ಲಾಜೆ ಅವರಿಗೂ ಮನವಿ ಸಲ್ಲಿಸಿದ್ದು, ಹಣ ಬಿಡುಗಡೆಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next