Advertisement
ನಮ್ಮ ಸರ್ಕಾರದಿಂದ ನಿರುದ್ಯೋಗಿ ಯುವಕ, ಯುವತಿಯರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಈ ಯೋಜನೆ ರೂಪಿಸಲಾಗಿದೆ. ಇಲಾಖೆ ಸವಲತ್ತಿನಿಂದ ನಿರುದ್ಯೋಗಿಗಳು ಉದ್ಯೋಗ ಪಡೆದುಕೊಳ್ಳಬೇಕಿದೆ ಎಂದರು. ವೆಬ್ ಪೋರ್ಟಲ್, ಮೊಬೈಲ್ ಆ್ಯಪ್ ಅತಿ ಉಪಯುಕ್ತವಾಗಿದೆ. ನಿಮ್ಮ ಆಸಕ್ತಿ ಆಧರಿಸಿ, ಯಾವುದೇ ರೀತಿಯ ತರಬೇತಿ ಪಡೆಯಲು ಇದು ಸಹಕಾರಿಯಾಗಲಿದೆ.
Related Articles
Advertisement
ನಿರ್ದಿಷ್ಟ ಅವಧಿಯ ತರಬೇತಿ ನಂತರ ಸೂಕ್ತ ಉದ್ಯೋಗ ಕಲ್ಪಿಸುವ ಉದ್ದೇಶವನ್ನೂ ಸಹ ಹೊಂದಲಾಗಿದೆ ಎಂದು ಅವರು ತಿಳಿಸಿದರು. ಸರ್ಕಾರ ತರಬೇತಿಗೆ ನೋಂದಣಿಯಾಗುವ ಅಭ್ಯರ್ಥಿಗಳ ಸಂಖ್ಯೆ ಆಧರಿಸಿ, ತರಬೇತಿಗೆ ಏಜೆನ್ಸಿಗಳನ್ನು ಗುರುತಿಸುತ್ತದೆ.
ಉನ್ನತ ವ್ಯಾಸಂಗ ಮಾಡಿ ಒಂದು ನಿರ್ದಿಷ್ಟವಾದ ಕೆಲಸಕ್ಕೆ ಅಂಟಿಕೊಳ್ಳುವವರನ್ನು ಇನ್ನಷ್ಟು ಉನ್ನತ ಉದ್ಯೋಗಕ್ಕೆ ಕಳುಹಿಸಬೇಕು. ಕನಿಷ್ಠ ಅಗತ್ಯ ಶಿಕ್ಷಣ ಪಡೆದವರಿಗೆ ಉತ್ತಮ ಉದ್ಯೋಗ ಅವಕಾಶ ಕಲ್ಪಿಸಿಕೊಡಬೇಕು ಅಥವಾ ಸ್ವ ಉದ್ಯೋಗ ಕೈಗೊಳ್ಳಲು ಸಹಕಾರಿಯಾಗಬೇಕು ಎಂಬುದು ತರಬೇತಿಯ ಉದ್ದೇಶ ಎಂದರು.
ಮೇಯರ್ ಅನಿತಾಬಾಯಿ, ಡೆಪ್ಯುಟಿ ಮೇಯರ್ ಮಂಜಮ್ಮ, ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್. ಅಶ್ವತಿ, ಡೂಡಾ ಅಧ್ಯಕ್ಷ ಎಚ್.ಜಿ. ರಾಮಚಂದ್ರಪ್ಪ, ಉಪವಿಭಾಗಾಧಿಕಾರಿ ಕುಮಾರಸ್ವಾಮಿ, ಜಿಪಂ ಉಪ ಕಾರ್ಯದರ್ಶಿ ಷಡಾಕ್ಷರಪ್ಪ ವೇದಿಕೆಯಲ್ಲಿದ್ದರು.