Advertisement

ಅಡ್ನೂರ ಪಂಚಾಕ್ಷರ ಶ್ರೀಗಳು ಲಿಂಗೈಕ್ಯ

03:03 PM Oct 16, 2020 | keerthan |

ಗದಗ: ಅಡ್ನೂರು ಬೃಹನ್ಮಠದ ಪಟ್ಟಾಧ್ಯಕ್ಷ ಶ್ರೀ ಘನ ಚಕ್ರವರ್ತಿ ಪಂಚಾಕ್ಷರ ಶಿವಾಚಾರ್ಯ ಸ್ವಾಮೀಜಿ (70) ಶುಕ್ರವಾರ ನಗರದಲ್ಲಿ ಲಿಂಗೈಕ್ಯರಾದರು.

Advertisement

ಕೋವಿಡ್ ಸೋಂಕು ಕಂಡು ಬಂದಿದ್ದರಿಂದ ಇತ್ತೀಚೆಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಿಸದ ಕಾರಣ ಶುಕ್ರವಾರ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಶಿವನಪಾದ ಸೇರಿದರು.

ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಅಡ್ನೂರು, ಕೊಪ್ಪಳ ಜಿಲ್ಲೆಯ ರಾಜೂರು ಹಾಗೂ ಹಾಗೂ ಗದಗ ನಗರದ ಹಾತಲಗೇರಿ ರಸ್ತೆಯಲ್ಲಿರುವ ಬೃಹನ್ಮಠದ ಪಟ್ಟಾಧ್ಯಕ್ಷರಾಗಿದ್ದರು. ಲಿಂ|ಪಂ|ಪುಟ್ಟರಾಜ ಕವಿ ಗವಾಯಿಗಳಿಗೆ ಕ್ರಿಯಾಮೂರ್ತಿಗಳಾಗಿದ್ದರು. ಪಂ|ಪುಟ್ಟರಾಜ ಕವಿ ಗವಾಯಿಗಳು ಪ್ರತಿನಿತ್ಯ ಶಿವನ ಪೂಜೆ ನೆರವೇರಿಸಿ, ಪಂಚಾಕ್ಷರ ಸ್ವಾಮೀಜಿಗಳಿಂದ ಪಾದೋದಕ ಸ್ವೀಕರಿಸಿದ ಬಳಿಕವೇ ಪ್ರಸಾದ ಸೇವಿಸುತ್ತಿದ್ದರು. ಶ್ರೀಗಳ ಅಗಲಿಕೆಯಿಂದ ಮೂರು ಮಠಗಳ ಅಪಾರ ಭಕ್ತ ಸಮೂಹ ಶೋಕ ಸಾಗರದಲ್ಲಿ ಮುಳುಗಿದೆ.

ಇದನ್ನೂ ಓದಿ:ಪ್ರವಾಹದ ನೀರಿನಿಂದಾಗಿ ಮರವೇರಿ ಕುಳಿತಿದ್ದ ಶತಾಯುಷಿ ವೃದ್ಧೆ, ಮಗನ ರಕ್ಷಣೆ

Advertisement

Udayavani is now on Telegram. Click here to join our channel and stay updated with the latest news.

Next