Advertisement

ಸ್ತ್ರೀಯರಿಗೆ ಮಾತ್ರ ಪ್ರವೇಶ

04:30 AM Jun 10, 2020 | Lakshmi GovindaRaj |

ಯದುವಂಶದ ಕುಲಗುರು ಗರ್ಗಾಚಾರ್ಯರು, ಶ್ರೀಕೃಷ್ಣನ ರಾಸಕ್ರೀಡೆಗೆ ಸಂಬಂಧಿಸಿದಂತೆ ವಿಚಿತ್ರ ಘಟನೆಯೊಂದನ್ನು ವಿವರಿಸಿದ್ದಾರೆ. ಕೃಷ್ಣ ಭಕ್ತರೂ, ಮಹಾತಪ ‌ಸ್ವಿಯೂ ಆದ ಮಹರ್ಷಿಗಳೊಬ್ಬರು ಶ್ರೀಕೃಷ್ಣನ ದರ್ಶನಕ್ಕಾಗಿ  ಹಾತೊರೆಯುತ್ತ ಮಹಾದೇವನೊಡನೆ ಬೃಂದಾವನಕ್ಕೆ ತೆರಳುತ್ತಾ ರೆ. ರಾಸಕ್ರೀಡೆಯನ್ನು ನೋಡಿ ಆನಂದಿಸಲೆಂದು ಬಂದವರಿಗೆ ಅಚ್ಚರಿ ಕಾದಿತ್ತು. ಅಲ್ಲಿಯ ವೃಕ್ಷಗಳು ಗೋಪಿಕೆಯರ ರೂಪ ತಳೆದು ಕಾವಲಿಗೆ ನಿಂತಿದ್ದರು.

Advertisement

ಇವರಿಬ್ಬರನ್ನೂ ಒಳಗೆ ಪ್ರವೇಶಿಸಲು ಅನುಮತಿಸಲಿಲ್ಲ. “ಬೃಂದಾವನದಲ್ಲಿ ಸ್ತ್ರೀಯರಿಗೆ ಮಾತ್ರವೇ ಪ್ರವೇಶವುಂಟು. ಶ್ರೀಕೃಷ್ಣನೊಬ್ಬನೇ ಇಲ್ಲಿ ಪುರುಷ. ಆದ್ದರಿಂದ ನೀವು ಸ್ತ್ರೀರೂಪ ತಳೆದರೆ ಮಾತ್ರ ಒಳಗೆ ಪ್ರವೇಶಿಸಬಹುದು’  ಎನ್ನುತ್ತಾರೆ. ಮತ್ತೆ ಮುಂದುವರಿಸುತ್ತಾ “ಮಾನಸ ಸರೋವರ ದಲ್ಲಿ ಮುಳುಗಿ, ಸ್ತ್ರೀರೂಪ ತಳೆದು ಬನ್ನಿ’ ಎಂದು ಸಲಹೆ ನೀಡುತ್ತಾರೆ. ಅವರಿಬ್ಬರೂ ಮಾನಸ ಸರೋವರದಲ್ಲಿ ಮುಳುಗಿ ಸ್ತ್ರೀರೂಪ ತಳೆದು, ಬೃಂದಾವನವನ್ನು ಪ್ರವೇಶಿಸಿ,  ರಾಸಕ್ರೀಡೆಯ ವೈಭವವನ್ನು ಕಂಡು ಆನಂದತುಂದಿಲರಾದರು. ಮೇಲಿನ ಘಟನೆ ವಿಚಿತ್ರವಾಗಿ ಕಾಣುತ್ತಿದೆ.

ಮಾನಸಸರೋವರಕ್ಕೆ ತೀರ್ಥಯಾತ್ರೆ ಮಾಡಿಬಂ ದ ಅನೇಕ ಪುರುಷರುಂಟು. ಅವರಲ್ಲಿ ಯಾರೂ ಸ್ತ್ರೀಯಾಗಿ ಬದಲಾದ ಸುದ್ದಿ  ಇಲ್ಲಿವರೆಗೆ ತಿಳಿದುಬಂದಿಲ್ಲ. ಆದ್ದರಿಂದ, ಮೇಲಿನ ಘಟನೆ ಕಾಲ್ಪನಿಕವೇ ಹೌದು ಎಂದೆನಿ  ಸುತ್ತದೆ. ಪುರಾಣಗಳು ಮುಂತಾದ ಋಷಿ  ಪ್ರಣೀತ ವಾದ ಗ್ರಂಥಗಳಲ್ಲಿ, ಅನೇಕ ಘಟನೆಗಳು ತತ್ತ್ವಾರ್ಥಗರ್ಭಿತವಾಗಿರುತ್ತವೆ. ಮೇಲಿನ  ಘಟನೆಯೂ ಉತ್ಕೃಷ್ಟ ವಿಚಾರವ ನ್ನೇ ತಿಳಿಸುತ್ತಿದೆ. ಇಲ್ಲಿ ಸ್ತ್ರೀರೂಪವೆನ್ನುವುದು ಬಾಹ್ಯರೂಪವಲ್ಲ. ಸೃಷ್ಟೀಶನಾದ ಭಗವಂತ  ನೊ ಬ್ಬನೇ ಪುರುಷ- ಪರಮಪುರುಷ.

ಇತರರೆಲ್ಲರೂ ಶ್ರೀಪತಿಯಾದ ಆತನನ್ನೇ ತಮ್ಮ ಪತಿ/ ಸ್ವಾಮಿಯಾಗಿ ಭಾವಿಸಿ, ಆತನಲ್ಲಿ  ತನ್ಮಯ ರಾಗುವುದನ್ನು, ಸ್ತ್ರೀಭಾವವೆಂಬುದಾಗಿ ಹೇಳಬಹುದು. ಅಂತಹ ಸ್ತ್ರೀರೂಪ- ಭಾವವ ನ್ನು ತಾಳಿದಾಗ, ಅಂತರಂಗದಲ್ಲಿ ರಮಿಸುವ ಭಗವಂತನ ದರ್ಶನ ಸಾಧ್ಯವೆಂಬ ಸತ್ಯವನ್ನೇ ಸಾರುತ್ತಿದೆ ಈ ಕಥೆ.  ಮಾನಸಸರೋವರ  ಎಂಬುದು ಹಿಮಾಲಯ ಪ್ರಾಂತ್ಯದಲ್ಲಿನ ಒಂದು ಸರೋವರ. ಪವಿತ್ರವಾದ ಯಾತ್ರಾಸ್ಥಳ. ಈ ಹೊರ ಸರೋವರವು ನಮ್ಮ ಮನಸ್ಸಿನಾಳದಲ್ಲಿನ ಪವಿತ್ರಸ್ನಾನದ ಹೊರನಕ್ಷೆ. ಇಂತಹ ಸ್ತ್ರೀಭಾವವನ್ನು ಎಲ್ಲರೂ ತಳೆದು, ಭಗವಂತನನ್ನು  ಅನುಭವಿಸಬಹುದಾಗಿದೆ.

* ಮೈಥಿಲೀ ರಾಘವನ್‌, ಸಂಸ್ಕೃತಿ ಚಿಂತಕಿ, ಅಷ್ಟಾಂಗಯೋಗ ವಿಜ್ಞಾನಮಂದಿರಂ

Advertisement
Advertisement

Udayavani is now on Telegram. Click here to join our channel and stay updated with the latest news.

Next