Advertisement

ಕೃಷ್ಣ ಪ್ರಸಾದ ಸ್ವೀಕರಿಸಿದ ಭಕ್ತರು

12:01 AM Jan 19, 2020 | Sriram |

ಉಡುಪಿ: ಅದಮಾರು ಪರ್ಯಾಯೋತ್ಸವದ ಮೊದಲ ಅನ್ನಪ್ರಸಾದ ವಿತರಣೆ ಶನಿವಾರ ಮಧ್ಯಾಹ್ನ ಶ್ರೀಕೃಷ್ಣ ಮಠದಲ್ಲಿ ನಡೆಯಿತು. ಮಧ್ವಾಂಗಣ, ಶ್ರೀಕೃಷ್ಣ ಮಠ, ಪಾರ್ಕಿಂಗ್‌ ಏರಿಯಾದ ವಿವಿಧ ಕೌಂಟರ್‌ಗಳಲ್ಲಿ ಸಾವಿರಾರು ಮಂದಿ ಅನ್ನಪ್ರಸಾದ ಸ್ವೀಕರಿಸಿದರು.

Advertisement

ಸ್ವಯಂಸೇವಕರು ಅನ್ನಪ್ರಸಾದವನ್ನು ವಿತರಿಸಿದರು. ಪಾರ್ಕಿಂಗ್‌ ಏರಿಯಾದಲ್ಲಿ ಬಫೆ ಮತ್ತು ಟೇಬಲ್‌ಗ‌ಳಲ್ಲಿ ಭಕ್ತರಿಗೆ ಪ್ರಸಾದ ಬಡಿಸಿದರೆ, ಮಠದ ಭೋಜನ ಶಾಲೆಯಲ್ಲಿ ಕೆಳಗೆ ಅನ್ನಪ್ರಸಾದ ವಿತರಿಸಲಾಯಿತು. ಮಧ್ಯಾಹ್ನ ಊಟಕ್ಕೆ ಅನ್ನ ಸಾರು, ಸಾಂಬಾರು, ಗೋಧಿ ಪಾಯಸ, ಪಲ್ಯ, ಗೋಧಿ ಬರ್ಫಿ, ಅಕ್ಕಿ ವಡೆ, ಲಡ್ಡು, ಮಜ್ಜಿಗೆ ಇತ್ತು. ಬೆಳಗ್ಗೆ 10.30ರಿಂದ 3 ಗಂಟೆಯ ವರೆಗೆ ಸುಮಾರು 50 ಸಾವಿರ ಭಕ್ತರು ಭೋಜನ ಸ್ವೀಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next