Advertisement

ಕಾಂಕ್ರೀಟ್‌ ಕಾಡಿನಲ್ಲಿ ಆದಿವಾಸಿಗಳಾಗಿ…

11:23 AM Jan 27, 2018 | |

ಆದಿವಾಸಿಗಳ ಥರಾ ನಮ್ಗೆ ಕಾಡಿನಲ್ಲಿ ಇರೋದಿಕ್ಕೆ ಆಗುತ್ತೋ, ಇಲ್ಲವೋ ಗೊತ್ತಿಲ್ಲ. ಆದರೆ, ಅವರ ಜೀವನಶೈಲಿಯ ಬಗ್ಗೆ ಸಿಟಿಜನ ಸದಾ ಕುತೂಹಲಿಗಳು. ಹಾಗಾಗಿ, ಬೆಂಗಳೂರಿನಂಥ ಮಹಾನಗರಗಳಲ್ಲಿ ಟ್ರೈಬಲ್‌ ಡ್ರೆಸ್‌ಗಳಂಥ ಮೇಳಗಳು ಹೆಚ್ಚೆಚ್ಚು ಜರುಗುತ್ತಲೇ ಇರುತ್ತವೆ. ಆದಿವಾಸಿಗಳ ಬದುಕನ್ನು ನೆನಪಿಸುವ ಇಂಥದ್ದೇ ಮೇಳವೊಂದು ಇದೀಗ ಆಯೋಜನೆಗೊಂಡಿದೆ.

Advertisement

ಇದು ಟ್ರೈಬಲ್‌ ಫ‌ುಡ್‌ ಫೆಸ್ಟಿವಲ್‌. ಕೋರಮಂಗಲದ ಬೊನ್‌ಸೌಥ್‌ ರೆಸ್ಟೋರೆಂಟಿನಲ್ಲಿ ಆದಿವಾಸಿಗಳ ಆಹಾರ ಮೇಳವನ್ನು ಆಯೋಜಿಸಲಾಗಿದ್ದು, ಖ್ಯಾತ ಬಾಣಸಿಗ ಮನು ಆರ್‌. ನಾಯರ್‌, ಬಗೆ ಬಗೆಯ ಭಕ್ಷ್ಯಗಳನ್ನು ಸಿದ್ಧಪಡಿಸಿದ್ದಾರೆ. ಬಿದರಿನಲ್ಲಿ ಅಕ್ಕಿಯ ಪಾಯಸ, ದೊನ್ನೆ ಫ್ಲೇವರ್‌ಗಳು, ಹಸಿ ತರಕಾರಿ- ಸೊಪ್ಪಿನ ವೆರೈಟಿ  ಸೇರಿದಂತೆ ಹಲವು ಬಗೆಯ ಖಾದ್ಯಗಳು ಆಹಾರಪ್ರಿಯರ ಬಾಯಿಯಲ್ಲಿ ನೀರೂರಿಸಲಿವೆ.

ಯಾವಾಗ?: ಜನವರಿ 31ರ ವರೆಗೆ
ಎಲ್ಲಿ?: ಬೊನ್‌ಸೌಥ್‌ ರೆಸ್ಟೋರೆಂಟ್‌, ಜ್ಯೋತಿನಿವಾಸ್‌ ಕಾಲೇಜು ರಸ್ತೆ, ಕೋರಮಂಗಲ

Advertisement

Udayavani is now on Telegram. Click here to join our channel and stay updated with the latest news.

Next