Advertisement

Manoj Muntashir: “ಹನುಮಂತ ದೇವರೇ ಅಲ್ಲ, ನಾವು ಅವರನ್ನು..” ʼಆದಿಪುರುಷ್‌ʼ ಸಂಭಾಷಣೆಕಾರ

09:57 AM Jun 21, 2023 | Team Udayavani |

ಮುಂಬಯಿ: ʼಆದಿಪುರುಷ್‌ʼ ಸಿನಿಮಾ ಸದ್ಯ ಟಾಕ್‌ ಆಫ್‌ ದಿ ಟೌನ್‌ ಆಗಿದೆ. ಸಿನಿಮಾ ಎಲ್ಲೆಡೆ ಭರ್ಜರಿ ರೆಸ್ಪಾನ್ಸ್‌ ಪಡೆದುಕೊಳ್ಳುವುದರ ಜೊತೆಗೆ ವಿವಾದಕ್ಕೂ ಕಾರಣವಾಗಿದೆ. ಈ ಎಲ್ಲಾ ಸವಾಲುಗಳನ್ನು ದಾಟಿ ಸಿನಿಮಾ ಬಾಕ್ಸ್‌ ಆಫೀಸ್‌ ನಲ್ಲಿ 240 ಕೋಟಿ ರೂ.ಗೂ ಅಧಿಕ ಕಲೆಕ್ಷನ್‌ ಮಾಡಿದೆ.

Advertisement

ರಾಮಾಯಣದ ಕಥಾಹಂದರವನ್ನು ಹೊಂದಿರುವ ʼಆದಿಪುರುಷ್‌ʼ ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ಸಿನಿಮಾದಲ್ಲಿ ಬಳಸಲಾದ ಕಳಪೆ ವಿಎಫ್‌ ಎಕ್ಸ್‌ ಹಾಗೂ ಕೆಲ ಸಂಭಾಷಣೆಗಳ ವಿರುದ್ಧ ಬಿಟೌನ್‌ ಸೇರಿದಂತೆ ಇತರ ಚಿತ್ರರಂಗದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಹನುಮಾನ್‌ ಪಾತ್ರಧಾರಿಗೆ ಬರೆದ ಡೈಲಾಗ್ಸ್‌ ಗಳಿಗೆ ವಿರೋಧ ವ್ಯಕ್ತವಾಗಿದೆ. ಡೈಲಾಗ್ಸ್‌ ಬರೆದ ಸಂಭಾಷಣೆಕಾರ ಮನೋಜ್ ಮುಂತಾಶಿರ್ ಅವರಿಗೆ ಈ ಕಾರಣಕ್ಕಾಗಿ ಜೀವ ಬೆದರಿಕೆಗಳು ಬಂದಿದೆ. ಈ ಸಂಬಂಧ ಮುಂಬಯಿ ಪೊಲೀಸರು ಸಂಭಾಷಣೆಕಾರನಿಗೆ ಭದ್ರತೆಯನ್ನು ನೀಡಿದ್ದಾರೆ.

ಈ ವಿವಾದ ಚರ್ಚೆಯಲ್ಲಿರುವಾಗಲೇ ಇದೀಗ ಮನೋಜ್ ಮುಂತಾಶಿರ್ ಸಂದರ್ಶನವೊಂದರಲ್ಲಿ ಆಡಿರುವ ಮಾತು ವೈರಲ್‌ ಆಗಿದೆ.

ʼಆಜ್‌ ತಕ್‌ʼ ಜೊತೆ ಮಾತನಾಡಿರುವ ಅವರು “ಬಜರಂಗಬಲಿ ದೇವರಲ್ಲ, ಅವರು ಅಪ್ಪಟ ಭಕ್ತ ಮಾತ್ರ. ನಾವು ಹನುಮಾನ್‌ ರನ್ನು ದೇವರಾಗಿ ಮಾಡಿದ್ದೇವೆ. ಏಕೆಂದರೆ ಅವರ ಭಕ್ತಿ ಶಕ್ತಿಶಾಲಿ ಆಗಿತ್ತು” ಎಂದು ಹೇಳಿದ್ದಾರೆ.

Advertisement

ಸದ್ಯ ಈ ಸಂದರ್ಶನದ ಕ್ಲಿಪಿಂಗ್‌ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ನೆಟ್ಟಿಗರು ಗರಂ ಆಗಿದ್ದಾರೆ. “ಈ ವ್ಯಕ್ತಿಗೆ ಹನುಮಂತನ ಬಗ್ಗೆ ಏನು ಗೊತ್ತಿಲ್ಲ. ಇದೇ ಕಾರಣಕ್ಕೆ ಆತ ಕಳಪೆ ಡೈಲಾಗ್ಸ್‌ ಬರೆದಿದ್ದಾನೆ” ಎಂದು ಒಬ್ಬರು ಟ್ವೀಟ್‌ ಮಾಡಿದ್ದಾರೆ.

ಸಿನಿಮಾದಲ್ಲಿ ಹನುಮಾನ್‌ ಪಾತ್ರಧಾರಿಯ ಐದು ಸಂಭಾಷಣೆಗಳನ್ನು ಬದಲಿಸಲಿದೆ ಎಂದು ಚಿತ್ರತಂಡ ಇತ್ತೀಚೆಗೆ ಹೇಳಿದೆ.‌

ಓಂ ರಾವತ್‌ ನಿರ್ದೇಶನ ಮಾಡಿರುವ ʼಆದಿಪುರುಷ್‌ʼ ಸಿನಿಮಾದಲ್ಲಿ ರಾಘವ್ ಆಗಿ ಪ್ರಭಾಸ್, ಜಾನಕಿಯಾಗಿ ಕೃತಿ ಸನೋನ್ ಕಾಣಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next