Advertisement

ಜೋಡೆತ್ತಿನ ಸಾವು : 4,000 ಮಂದಿಗೆ ಸಂತರ್ಪಣೆ ಹಾಕಿ ಗೌರವ ಕೊಟ್ಟ ರೈತ

07:10 PM Feb 02, 2022 | Team Udayavani |

ಶಾಜಾಪುರ : ಇತ್ತೀಚೆಗೆ ಮಧ್ಯಪ್ರದೇಶದ ಶಾಜಾಪುರ ಜಿಲ್ಲೆಯ ರೈತರೊಬ್ಬರು ತಮ್ಮ ಎತ್ತುಗಳು ಸಾವನ್ನಪ್ಪಿದ ಬಳಿಕ ಅಂತ್ಯಕ್ರಿಯೆ ನೆರವೇರಿಸಿ ಸುಮಾರು 4,000 ಮಂದಿಗೆ ಸಂತರ್ಪಣೆ ನೀಡಿ ತಮ್ಮ ಬಹುಕಾಲದ ಒಡನಾಡಿಗಳಿಗೆ ಭಾವುಕ ವಿದಾಯ ಹೇಳಿದ್ದಾರೆ.

Advertisement

ಮದನ ಗ್ರಾಮದಲ್ಲಿ ಮಂಗಳವಾರ ಅನ್ನಸಂತರ್ಪಣೆ ಏರ್ಪಡಿಸಲಾಗಿದ್ದು, ಎತ್ತುಗಳ ಮರಣಾನಂತರದ ಧಾರ್ಮಿಕ ವಿಧಿವಿಧಾನಗಳಿಗೆ ಸುಮಾರು 2 ಲಕ್ಷ ರೂಪಾಯಿ ಖರ್ಚು ಮಾಡಿದ್ದೇನೆ ಎಂದು ರೈತ ಜಗದೀಶ್ ಸಿಂಗ್ ಸಿಸೋಡಿಯಾ ಹೇಳಿದ್ದಾರೆ.

ನಾನು ಕೇವಲ 12 ವರ್ಷದವನಿದ್ದಾಗ `ರಾಮ್’ ಮತ್ತು `ಶ್ಯಾಮ್’ ಎಂಬ ಜೋಡೆತ್ತುಗಳನ್ನು ತರಲಾಗಿತ್ತು ಎಂದು ಅವರು ಹೇಳಿದರು.

ರಾಮ್ ಸುಮಾರು ಎರಡು ವರ್ಷಗಳ ಹಿಂದೆ ಸಾವನ್ನಪ್ಪಿದ್ದು,  ಶ್ಯಾಮ್ ಹದಿನೈದು ದಿನಗಳ ಹಿಂದೆ ಕೊನೆಯುಸಿರೆಳೆದಿದ್ದಾನೆ. ಅವರಿಬ್ಬರು ನನಗೆ ಮಕ್ಕಳಿದ್ದಂತೆ ಎಂದು ಅವರು ಹೇಳಿದರು.

ಸಿಸೋಡಿಯಾ ಅವರು ಉಜ್ಜಯಿನಿಗೆ ಭೇಟಿ ನೀಡುವ ಮೂಲಕ ಶ್ಯಾಮ್ ಅವರ ಮರಣದ ನಂತರ ಆಚರಣೆಗಳನ್ನು ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next