Advertisement
ಕಸ ವಿಲೇವಾರಿ ಕುರಿತು ಚರ್ಚೆಪ.ಪಂ. ವ್ಯಾಪ್ತಿಯ ಅತೀ ದೊಡ್ಡ ಸಮಸ್ಯೆಯಾದ ಕಸ ವಿಲೇವಾರಿಯ ಕುರಿತು ಒಂದಷ್ಟು ಚರ್ಚೆ ನಡೆಯತು. ಮನೆಯಿಂದ ಹಸಿಕಸ, ಒಣಕಸವನ್ನು ಒಟ್ಟಾಗಿ ನೀಡಿದರೆ ಪೌರಕಾರ್ಮಿಕರು ಸ್ವೀಕರಿಸುತ್ತಿಲ್ಲ ಎನ್ನುವ ದೂರುಗಳು ಬಂದಿದೆ ಎಂದು ನಾಮ ನಿರ್ದೇಶಿತ ಸದಸ್ಯೆ ಅಚ್ಯುತ್ ಪೂಜಾರಿ, ಸದಸ್ಯೆ ಸಾಧು ಪಿ. ಸಭೆಯ ಗಮನಕ್ಕೆ ತಂದರು. ಈ ಕುರಿತು ಮಾತನಾಡಿದ ಸದಸ್ಯ ರಾಜು ಪೂಜಾರಿ, ಕೆಲವು ದಿನಗಳ ಹಿಂದೆ ಜಿಲ್ಲಾಧಿಕಾರಿಗಳು ದಿಢೀರ್ ಆಗಿ ಕಸವಿಲೇವಾರಿ ಮಾಡುವ ಹಳೆಕೋಟೆ ಮೈದಾನಕ್ಕೆ ಭೇಟಿ ನೀಡಿದ್ದು, ತೆರದ ಸ್ಥಳದಲ್ಲಿ ಕಸ ವಿಲೇವಾರಿ ಮಾಡದಂತೆ ಸೂಚಿಸಿದ್ದಾರೆ ಹಾಗೂ ಪ್ರಸ್ತುತ ಇರುವ ಕಸವನ್ನು ತೆರವುಗೊಳಿಸುವಂತೆ ಹೇಳಿದ್ದಾರೆ.ಒಣಕಸವನ್ನು ವಾರಕ್ಕೊಮ್ಮೆ ಹಾಗೂ ಹಸಿ ಕಸವನ್ನು ಪ್ರತಿದಿನ ಪಡೆದು ಅನಂತರ ಬೇರ್ಪಡಿಸಿ ಬೇರೆ ಕಡೆಯಲ್ಲಿ ವಿಲೇವಾರಿ ಮಾಡಬೇಕು ಎಂದು ತಿಳಿಸಿದ್ದಾರೆ.
Related Articles
ಕುಡಿಯಲು ಬಳಸಿಕೊಳ್ಳಲು ಸಲಹೆ
ವಾರಾಹಿ ಕಾಲುವೆಯ ನೀರನ್ನು ಉಡುಪಿ ನಗರಸಭೆಯವರು ಕುಡಿಯಲು ಬಳಸಿಕೊಳ್ಳುವ ಚಿಂತನೆ ನಡೆಸುತ್ತಿದ್ದು, ಸಾಲಿಗ್ರಾಮ ಪ.ಪಂ. ಕೂಡ ಇದೇ ಮಾದರಿಯಲ್ಲಿ ಬಳಸಿಕೊಳ್ಳಲು ಸಾಧ್ಯವಿದೆಯೇ ಎನ್ನುವುದನ್ನು ಸಂಬಂಧಪಟ್ಟ ಅಧಿಕಾರಿಗಳ ಜತೆಗೆ ಚರ್ಚಿಸಿ ಕ್ರಮಕೈಗೊಳ್ಳಬೇಕಿದೆ ಎಂದು ಸದಸ್ಯ ರಾಜು ಪೂಜಾರಿ ಸಲಹೆ ನೀಡಿದರು. ಈ ಕುರಿತು ಸಾಧ್ಯಾಸಾಧ್ಯತೆಯನ್ನು ಪರಿಶೀಲಿಸುವಂತೆ ಸಲಹೆ ಕೇಳಿ ಬಂತು.
Advertisement
ಉಪಾಧ್ಯಕ್ಷ ಉದಯ ಪೂಜಾರಿ, ಮುಖ್ಯಾಧಿಕಾರಿ ಶ್ರೀಪಾದ್ ಪುರೋಹಿತ್ ಮುಂತಾದವರು ಉಪಸ್ಥಿತರಿದ್ದರು.
ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಲು ಆಗ್ರಹಪ.ಪಂ. ವ್ಯಾಪ್ತಿಯಲ್ಲಿ ಹಲವು ಕಾಮಗಾರಿಗಳನ್ನು ನಿರ್ವಹಿಸುತ್ತಿರುವ ಸುರೇಶ ಶೆಟ್ಟಿ ಎನ್ನುವ ಗುತ್ತಿಗೆದಾರ ಕೆಲವೊಂದು ಕಾಮಗಾರಿಗಳನ್ನು ಅಸಮರ್ಪಕವಾಗಿ ನಿರ್ವಹಿಸಿದ್ದು, ಇದರಿಂದ ಸರಕಾರದ ಅನುದಾನ ದುರ್ಬಳಕೆಯಾಗಿದೆ ಹಾಗೂ ಇದನ್ನು ಪ್ರಶ್ನಿಸಿದ ಸದಸ್ಯರಿಗೂ ಈತ ಅಗೌರವ ತೋರಿದ್ದಾನೆ. ಆದ್ದರಿಂದ ಈತನನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಸದಸ್ಯರಾದ ಸಂಜೀವ ದೇವಾಡಿಗ ಆಗ್ರಹಿಸಿದರು. ಈ ಕುರಿತು ಉಪಾಧ್ಯಕ್ಷ ಉದಯ ಪೂಜಾರಿ ಸೇರಿದಂತೆ ಹಲವು ಸದಸ್ಯರು ಒಮ್ಮತ ಸೂಚಿಸಿದರು. ಈ ವಿಚಾರದಲ್ಲಿ ಕಾನೂನಿನ ಪ್ರಕಾರ ಪರಿಶೀಲಿಸಿ, ಕ್ರಮಕೈಗೊಳ್ಳುವ ಭರವಸೆಯನ್ನು ಮುಖ್ಯಾಧಿಕಾರಿ ಶ್ರೀಪಾದ್ ಪುರೋಹಿತ್ ನೀಡಿದರು.