Advertisement

ಅಕ್ಕಮಹಾದೇವಿಗೆ ಇಂದಿಗೂ ಸಿಕ್ಕಿಲ್ಲ ನ್ಯಾಯ

04:34 PM Aug 05, 2018 | Team Udayavani |

ದಾವಣಗೆರೆ: ಕನ್ನಡದ ಪ್ರಪ್ರಥಮ ಕವಿಯತ್ರಿ ಅಕ್ಕಮಹಾದೇವಿ ಮಹಿಳೆ ಎಂಬ ಕಾರಣಕ್ಕೆ ಹೆಚ್ಚು ಪ್ರಚಲಿತಕ್ಕೆ ಬಂದಿಲ್ಲ ಎಂದು ಮಾಜಿ ಸಚಿವೆ ಲೀಲಾದೇವಿ ಆರ್‌. ಪ್ರಸಾದ್‌ ಹೇಳಿದರು.

Advertisement

ಶನಿವಾರ, ಕುವೆಂಪು ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಶರಣ ಮಾಗನೂರು ಬಸಪ್ಪ ಪ್ರತಿಷ್ಠಾನದ ಆರೂಢ ದಾಸೋಹಿ ಶರಣ ಮಾಗನೂರು ಬಸಪ್ಪ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಅಮೇರಿಕಾದ ಮೇರಿಲ್ಯಾಂಡ್‌ನ‌ಲ್ಲಿ ಕನ್ನಡದ ಪ್ರಪ್ರಥಮ ಕವಿಯತ್ರಿ ಅಕ್ಕಮಹಾದೇವಿಯವರ ಕಂಚಿನ ಪುತ್ಥಳಿಯನ್ನು ಖುದ್ದು ಸ್ಥಾಪಿಸಿದ್ದೇನೆ. ಆದರೆ, ಆ ಕಾರ್ಯ ಪ್ರಚಾರಕ್ಕೇ ಬರಲಿಲ್ಲ. ನೀರಜ್‌ ಪಾಟೀಲ್‌ ಲಂಡನ್‌ನಲ್ಲಿ ಬಸವಣ್ಣನವರ ಪುತ್ಥಳಿ ಸ್ಥಾಪಿಸಿದ್ದು ಭಾರೀ ಪ್ರಚಾರ ಪಡೆಯಿತು. 

ಅಕ್ಕಮಹಾದೇವಿ ಮಹಿಳೆ ಎಂದು ದ್ವಿತೀಯ ದರ್ಜೆ ಪ್ರಜೆಯಂತೆ ನೋಡಲಾಗುತ್ತಿದೆಯೇ ಎಂಬುದಾಗಿ ಒಂದು ಕಾರ್ಯಕ್ರಮದಲ್ಲೇ ನಾನು ಪ್ರಶ್ನಿಸಿದ್ದೆ ಎಂದರು. ಮಹಿಳಾ ಲೋಕದ ವಜ್ರದಂತಿರುವ ಅಕ್ಕಮಹಾದೇವಿ ಹೆಸರು, ಸಾಧನೆ ಬರೀ ಉಡುತಡಿ, ಕರ್ನಾಟಕ, ಶ್ರೀಶೈಲದಲ್ಲಿ ಮಾತ್ರವೇ ಪ್ರಚಾರಕ್ಕೆ ಬರುವುದು ಮಾತ್ರವಲ್ಲ, ಇಡೀ ವಿಶ್ವದಲ್ಲೇ ಅಕ್ಕಮಹಾದೇವಿಯವರ ಹೆಸರು ಶಾಶ್ವತವಾಗಿ ಉಳಿಯುವಂತೆ ಮಾಡಲಾಗುವುದು. ತಮ್ಮ ಕಡೆಯ ಉಸಿರು ಇರುವವರೆಗೂ ಅಕ್ಕಮಹಾದೇವಿಯವರ ಸೇವೆ ಮಾಡುವುದಾಗಿ ತಿಳಿಸಿದರು. 

ನಮ್ಮಂತಹವರ ಕೈಯಲ್ಲಿ ಅಕ್ಕಮಹಾದೇವಿಯ ಬದುಕಿನ ಒಂದು ಎಳೆಯನ್ನೂ ಪಾಲಿಸಲಿಕ್ಕೆ ಆಗುವುದಿಲ್ಲ. ನಾವು ಬರೀ ಸ್ವಾರ್ಥಿಗಳಾಗಿದ್ದೇವೆ. ಅಹಂಕಾರ, ಆಡಂಬರದ ಮಧ್ಯದಲ್ಲಿ ಬದುಕನ್ನೇ ಕಳೆದುಕೊಳ್ಳುತ್ತಿದ್ದೇವೆ. ಈ ಸಮಾರಂಭದಲ್ಲಿ ನನ್ನನ್ನು ಅಕ್ಕಮಹಾದೇವಿ ಎಂದಿದ್ದನ್ನು ಒಪ್ಪುವುದೇ ಇಲ್ಲ. ಅಕ್ಕಮಹಾದೇವಿಗೆ ಅಕ್ಕಮಹಾದೇವಿಯೇ ಸಾಟಿ ಎಂದರು.

ಅಕ್ಕಮಹಾದೇವಿಯ ಜನ್ಮಸ್ಥಳ ಉಡುತಡಿಯಲ್ಲಿ ಹಲವಾರು ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುತ್ತಿದೆ. ನಾನು ಬೆಂಗಳೂರಿನಿಂದ ಸರ್ಕಾರಿ ಬಸ್‌ನಲ್ಲೇ ಉಡುತಡಿಗೆ ಬಂದು ಹೋಗುವುದಕ್ಕೂ ಕೆಲವರು ಲಾಭ ಇರುವ ಕಾರಣಕ್ಕೆ ಹಾಗೆ ಮಾಡುತ್ತಿದ್ದಾರೆ ಎಂದಿದ್ದರು. ಒಬ್ಟಾತ ಕೊಲೆ ಮಾಡಲಿಕ್ಕೂ ಬಂದಿದ್ದ.

Advertisement

ಅಂತಹವರಿಗೆ ತಕ್ಕ ಉತ್ತರ ಕೊಟ್ಟಿದ್ದೇನೆ. ನನಗೆ ಎಲ್ಲವೂ ಇದೆ. ಆದರೆ, ತೃಪ್ತಿಯೇ ಇಲ್ಲ. ಅಕ್ಕಮಹಾದೇವಿಯ
ಹೆಸರು ಶಾಶ್ವತವಾಗಿ ಉಳಿಯುವ ಕೆಲಸ ಆಗುವ ತನಕ ತೃಪ್ತಿ ಸಿಗುವುದಿಲ್ಲ ಎಂದು ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ಬೆಂಗಳೂರಿನ ಬೇಲಿಮಠದ ಶ್ರೀ ಶಿವರುದ್ರಸ್ವಾಮೀಜಿ ಮಾತನಾಡಿ, ಅಕ್ಕಮಹಾದೇವಿ,
ರಾಣಿ ರುದ್ರಮ್ಮ, ಬೆಳವಡಿಯ ಮಲ್ಲಮ್ಮ, ಕೆಳದಿ ಚೆನ್ನಮ್ಮ, ಕಿತ್ತೂರು ರಾಣಿ ಚನ್ನಮ್ಮ, ವಿಜಯದೇವಿ,
ಅತ್ತಿಮಬ್ಬೆ, ರಾಣಿ ಅಬ್ಬಕ್ಕ… ಮುಂತಾದ ಮಹಿಳೆಯರು ಇಡೀ ನಾಡಿಗೆ ಗೌರವ ತಂದುಕೊಟ್ಟವರು.

ಹಾಗಾಗಿಯೇ ಕರ್ನಾಟಕದಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನಮಾನ ಇದೆ. ಅಂತಹ ವಿಶಿಷ್ಟ ಪರಂಪರೆಯನ್ನು
ಮುಂದುವರೆಸಿಕೊಂಡು ಹೋಗಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ತಿಳಿಸಿದರು.

ಕನ್ನಡ ಭಾಷೆ, ನೆಲ, ಸಂಸ್ಕೃತಿ ತನ್ನದೇ ವಿಶಿಷ್ಟತೆಯನ್ನು ಹೊಂದಿದೆ. ಅಂತಹ ವಿಶಿಷ್ಟತೆಯನ್ನು ಉಳಿಸಿ,
ಬೆಳೆಸಿಕೊಂಡು ಹೋಗಬೇಕಾದ ಗುರುತರ ಜವಾಬ್ದಾರಿ ಕನ್ನಡ ಸಾಹಿತ್ಯ ಪರಿಷತ್‌ ಮೇಲಿದೆ. ಹಿಂದಿನ ಮತ್ತು
ಇಂದಿನ ಶಿಕ್ಷಣ ಸಾಕಷ್ಟು ವ್ಯತ್ಯಾಸದಿಂದ ಕೂಡಿದೆ. ಈಗ ಬೋಧಿಸುತ್ತಿರುವ ಪಠ್ಯಕ್ರಮ ಅನಾಹುತಕ್ಕೆ
ಕಾರಣವಾಗುತ್ತಿದೆ. ವಿದೇಶಿ ಕಂಪನಿಗಳಿಗೆ ಬೇಕಾದ ಗುಲಾಮರನ್ನು ಸಿದ್ಧಪಡಿಸುವಂತಹ ಶಿಕ್ಷಣದ ವ್ಯವಸ್ಥೆ
ಇದೆ. ಇಂತಹ ಕಾಲಘಟ್ಟದಲ್ಲಿ ಕನ್ನಡದ ಅಂತಃಸತ್ವವನ್ನು ಉಳಿಸುವ ಸವಾಲು ಕನ್ನಡ ಸಾಹಿತ್ಯ ಪರಿಷತ್‌ ಮುಂದೆ
ಇದೆ ಎಂದು ತಿಳಿಸಿದರು. ಶರಣ ಮಾಗನೂರು ಬಸಪ್ಪ ಪ್ರತಿಷ್ಠಾನದ ಅಧ್ಯಕ್ಷ ಎಂ.ಬಿ. ಸಂಗಮೇಶ್‌ಗೌಡ್ರು
ಅಧ್ಯಕ್ಷತೆ ವಹಿಸಿದ್ದರು. ವಿಜಯಪುರ ಅಕ್ಕಮಹಾದೇವಿ ವಿಶ್ವವಿದ್ಯಾಲಯದ ಎಮೆರಿಟಸ್‌ ಪ್ರಾಧ್ಯಾಪಕಿ ಡಾ|
ವಿಜಯದೇವಿ ಅಭಿನಂದನಾ ನುಡಿಗಳನ್ನಾಡಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ವಿವಿಧ ಜಿಲ್ಲಾ ಘಟಕಗಳ ಅಧ್ಯಕ್ಷರಾದ ಡಾ| ಎಚ್‌.ಎಸ್‌. ಮಂಜುನಾಥ್‌ ಕುರ್ಕಿ, ಡಾ| ವೈ.ಡಿ. ರಾಜಣ್ಣ, ಸಿ.ಕೆ. ರವಿಕುಮಾರ್‌ ಚಾಮಲಾಪುರ, ನಾಯಕರಹಳ್ಳಿ ಮಂಜೇಗೌಡ, ಟಿ.ಎಸ್‌. ಲೋಕೇಶ್‌ ಸಾಗರ್‌, ಸುನಂದಾ ಸಂಗಮೇಶ್‌ ಗೌಡ್ರು ಇತರರು ಇದ್ದರು. ಬಿ. ದಿಳೆÂಪ್ಪ ಸ್ವಾಗತಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next