Advertisement

ಟೊಮ್ಯಾಟೋ ವ್ಯಾಪಾರಿಯ ಕಷ್ಟಕ್ಕೆ ಸ್ಪಂದಿಸಿದ ನಟ ವಿಜಯ್‌ ವರ್ಮಾ; ಸರಳತೆ ಮೆಚ್ಚಿದ ಫ್ಯಾನ್ಸ್

06:41 PM Jul 29, 2023 | Team Udayavani |

ಮುಂಬಯಿ: ಟೊಮ್ಯಾಟೋ ಬೆಲೆ ಗಗಕ್ಕೇರಿದೆ. ಗ್ರಾಹಕರು ತರಕಾರಿಯನ್ನು ಖರೀದಿಸುವಾಗ ಟೊಮ್ಯಾಟೋ ಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಸಣ್ಣ ವ್ಯಾಪಾರಿಗಳು ತರಕಾರಿಯನ್ನುಕೊಂಡು ಅವುಗಳನ್ನು ಮಾರಲು ಕಷ್ಟಪಡುತ್ತಾರೆ.

Advertisement

ರಾಮೇಶ್ವರ್ ಎನ್ನುವ ಸಣ್ಣ ವ್ಯಾಪಾರಿ ಸಗಟು ಮಾರುಕಟ್ಟೆಯಿಂದ ತರಕಾರಿಯನ್ನುಕೊಂಡು ಅವುಗಳನ್ನು ದೆಹಲಿಯ ಆಜಾದ್‌ಪುರದ ಸುತ್ತಮುತ್ತ ಮಾರುತ್ತಾರೆ. ಹೀಗೆ ಮಾಡಿದರೆ ಮಾತ್ರ ಅವರ ಜೀವನ ಸಾಗುತ್ತದೆ. ಇತ್ತೀಚೆಗೆ ಅವರು ಟೊಮ್ಯಾಟೋ ಕೊಳ್ಳಲು ಕಷ್ಟವಾಗುತ್ತದೆ, ನನ್ನ ಬಳಿ ಅಷ್ಟು ಹಣವಿಲ್ಲ‌ ಎಂದು ಮಾಧ್ಯಮವೊಂದರ ಮುಂದೆ ದುಃಖಿತರಾಗಿ ಹೇಳಿರುವ ವಿಡಿಯೋ ಸೋಶಿಯಲ್‌ ಮೀಡಿಯಾದಲಿ ಭಾರೀ ವೈರಲ್‌ ಆಗಿದೆ.

ಮಾರುಕಟ್ಟೆಯಲ್ಲಿ ಎಲ್ಲಾ ತರಕಾರಿಯ ಬೆಲೆ ಹೆಚ್ಚಾಗಿದೆ. ಟೊಮ್ಯಾಟೋವನ್ನು ಕೊಳ್ಳುವಷ್ಟು ಹಣ ನನ್ನ ಬಳಿಯಿಲ್ಲ.ಇಲ್ಲಿಂದ ಕೊಂಡು ಹೋಗಿ ಮಾರಿದರೂ, ಅದು ಅಷ್ಟು ಬೆಲೆಗೆ ಮಾರಾಟವಾಗುತ್ತದೆ ಎನ್ನುವುದರ ಬಗ್ಗೆ ಖಾತ್ರಿಯಿಲ್ಲ. ಇದರಿಂದ ನನಗೆ ತುಂಬಾ ಕಷ್ಟವಾಗುತ್ತದೆ ಎಂದು ರಾಮೇಶ್ವರ್ ಹೇಳುತ್ತಾ ಭಾವುಕರಾಗುತ್ತಾರೆ.

ಇದನ್ನೂ ಓದಿ:  B-town: ಮೊದಲ ದಿನವೇ ಬಾಕ್ಸ್‌ ಆಫೀಸ್‌ನಲ್ಲಿ ಕೋಟಿ ಕೋಟಿ ಕಮಾಯಿ ಮಾಡಿದ ಹಿಂದಿ ಸಿನಿಮಾಗಳಿವು

ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ನಟ ವಿಜಯ್‌ ವರ್ಮಾ ಅವರ ಗಮನ ಸೆಳೆದಿದೆ.

Advertisement

“ಇದು ನಿಜಕ್ಕೂ ಹೃದಯವಿದ್ರಾವಕವಾಗಿದೆ. ಇವರಿಗೆ ಸಹಾಯ ಮಾಡುವ ಉಪಾಯವೇನಾದರೂ ಇದೆಯೇ? ಇವರ ಹಾಗೆ ಜೀವನೋಪಾಯವನ್ನು ಕಳೆದುಕೊಂಡವರಿಗೆ ಸಹಾಯ ಮಾಡಲು ಏನಾದರೂ ಮಾರ್ಗವಿದೆಯೇ? ದಯವಿಟ್ಟು ಹೇಳಿ” ಎಂದು ವಿಜಯ್‌ ವರ್ಮಾ ಅವರು ಟ್ವೀಟ್‌ ಮಾಡಿದ್ದಾರೆ.

ಇವರ ಟ್ವೀಟ್‌ ವೈರಲ್‌ ಆಗಿದ್ದು, ನಟನ ಸರಳ ವ್ಯಕ್ತಿತ್ವವನ್ನು ಹಲವರು ಶ್ಲಾಘಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next