Advertisement

ನಟ ವಿಜಯ್‌ ಸೇತುಪತಿ ಆಪ್ತ ಸಹಾಯಕನ ಮೇಲೆ ಹಲ್ಲೆಗೆ ಯತ್ನ

09:46 AM Nov 04, 2021 | Team Udayavani |

ಬೆಂಗಳೂರು: ತಮಿಳು ನಟ ವಿಜಯ್‌ ಸೇತು ಪತಿ ಆಪ್ತ ಸಹಾಯಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ. ಈ ಸಂಬಂಧ ನಟ ವಿಜಯ್‌ ಸೇತುಪತಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಏರ್‌ಪೋರ್ಟ್‌) ಠಾಣೆಗೆ ದೂರು ನೀಡಿದ್ದು, ಬಳಿಕ ವಾಪಸ್‌ ಪಡೆದುಕೊಂಡಿದ್ದಾರೆ.

Advertisement

ವಿಜಯ್‌ ಸೇತುಪತಿ ಮತ್ತು ಅವರ ಆಪ್ತ ಸಹಾಯಕ ಜಾನ್ಸನ್‌ ಬಿಡದಿ ಬಳಿಯ ಇನೋವೇಟಿವ್‌ ಫಿಲಂ ಸಿಟಿಯಲ್ಲಿ ತಮಿಳಿನ ರಿಯಾಲಿಟಿ ಶೋ ಶೂಟಿಂಗ್‌ಗಾಗಿ ಬೆಂಗಳೂರಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಆರೋಪಿ ವಿಜಯ್‌ ಬಳಿ ಬಂತು ಸೆಲ್ಫಿ ಪಡೆಯಲು ಆರೋಪಿ ಮಹಾಗಾಂಧಿ ಎಂಬಾತ ಮುಂದಾಗಿದ್ದಾನೆ.

ಇದನ್ನೂ ಓದಿ:- ಕಲಬುರಗಿ: ಬಸ್ ನಿಲ್ದಾಣದಲ್ಲಿ ಜನರೆದುರೇ ಪೊಲೀಸ್ ಪೇದೆ ಮಗನ ಕೊಚ್ಚಿ ಕೊಲೆ

ಆಗ ಆತ ಮದ್ಯ ಸೇವಿಸಿದ್ದ ಎಂಬುದು ಗೊತ್ತಾಗುತ್ತಿದ್ದಂತೆ ವಿಜಯ್‌ ನಿರಾಕರಿಸಿದ್ದಾರೆ. ಆದರೂ ಪದೇ ಪದೆ ಸೆಲ್ಫಿ ಪಡೆಯಲು ಮುಂದಾದಾಗ ಆಪ್ತ ಸಹಾಯಕ ಜಾನ್ಸನ್‌ ದೂರ ತಳ್ಳಿದ್ದಾನೆ. ಅದೇ ಕೋಪದಲ್ಲಿ ಆರೋಪಿ ಏರ್‌ಪೋರ್ಟ್‌ನಲ್ಲಿ ಇಳಿದು ನಡೆದುಕೊಂಡು ಹೋಗುವಾಗ ಹಿಂದಿನಿಂದ ಏಕಾಏಕಿ ಬಂದ ಆರೋಪಿ ಜಾನ್ಸನ್‌ ಮೇಲೆ ನೆಗೆದು ಹಲ್ಲೆಗೆ ಮುಂದಾಗಿದ್ದಾನೆ. ಆಗ ಸ್ಥಳೀಯರು ಆತನನ್ನು ಹಿಡಿದುಕೊಂಡಿದ್ದಾರೆ ಎಂದು ಪೊಲೀಸರು ಹೇಳಿದರು.

ಘಟನೆಯಿಂದ ವಿಚಲಿತರಾದ ವಿಜಯ್‌ ಸೇತುಪತಿ ಏರ್‌ಪೋರ್ಟ್‌ ಠಾಣೆಯಲ್ಲಿ ದೂರು ಕೊಟ್ಟಿದ್ದರು. ಬಳಿಕ ಆರೋಪಿಯಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡು ಪೊಲೀಸರು ಎಚ್ಚರಿಕೆ ನೀಡಿದ ಬಳಿಕ ಪ್ರಕರಣವನ್ನು ಹಿಂಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು. ಬುಧವಾರ ರಾತ್ರಿ ಚೆನ್ನೈಗೆ ವಾಪಸ್‌ ತೆರಳಿದ ಸೇತುಪತಿಗೆ ಭದ್ರತೆ ಒದಗಿಸಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next