Advertisement

ಡಿ ಬಾಸ್ ವಿರೋಧಿಗಳಿಗೆ ನಟ ಧರ್ಮ ಕೀರ್ತಿರಾಜ್ ಖಡಕ್ ಪ್ರತ್ಯುತ್ತರ

01:38 PM Jul 19, 2021 | Team Udayavani |

ಬೆಂಗಳೂರು:  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಕನ್ನಡದ ಯುವ ನಟ ಧರ್ಮಕೀರ್ತಿರಾಜ್ ಬೆಂಬಲ ಸೂಚಿಸಿದ್ದಾರೆ. ಜೊತೆಗೆ ಡಿ ಬಾಸ್ ವಿರೋಧಿಗಳಿಗೆ ಸಖತ್ ಟಾಂಗ್ ಕೊಟ್ಟಿದ್ದಾರೆ.

Advertisement

ಕನ್ನಡ ಚಿತ್ರರಂಗದ ಯಜಮಾನ ದರ್ಶನ್ ಅವರಿಗೆ ಒಂದರ ನಂತರ ಮತ್ತೊಂದರಂತೆ ವಿವಾದಗಳು ಅಂಟಿಕೊಳ್ಳುತ್ತಿವೆ. 25 ಕೋಟಿ ರೂ. ಸಾಲಕ್ಕೆ ಶ್ಯೂರಿಟಿ ಪ್ರಕರಣ ಮುಗಿಯುತ್ತಿದ್ದಂತೆ ಹೋಟೆಲ್ ವೇಟರ್ ಮೇಲೆ ಹಲ್ಲೆ ಪ್ರಕರಣ ಕೇಳಿ ಬಂತು. ಇದಾದ ಬಳಿಕ ದೊಡ್ಮನೆ ಆಸ್ತಿ ವಿಚಾರ ಮುನ್ನೆಲೆಗೆ ಬಂತು. ಹೀಗೆ ದರ್ಶನ್ ಅವರನ್ನು ಬೆಂಬಿಡದೆ ಕಾಡುತ್ತಿರುವ ವಿರೋಧಿಗಳಿಗೆ ಧರ್ಮಕೀರ್ತಿ ರಾಜ್ ಭರ್ಜರಿ ಟಾಂಗ್ ಕೊಟ್ಟಿದ್ದಾರೆ.

ಟ್ವೀಟ್ ಮೂಲಕ ಡಿ ಬಾಸ್ ಬೆಂಬಲಿಸಿರುವ ಕ್ಯಾಡ್ಬರಿ ಸ್ಟಾರ್, ಸುತ್ತಲೂ ನೀರು ಮಧ್ಯದಲ್ಲಿ ದ್ವೀಪ. ಆ ದ್ವೀಪಕ್ಕೆ ನೀರಿನ ರೂಪದಲ್ಲಿ ಅಪ್ಪಳಿಸುವ ದುಷ್ಟರ ದಂಡು. ಆದರೆ, ಅವರಿಗೆ ಗೊತ್ತಿರಲಿಲ್ಲ, ಅಲ್ಲಿರೋದು ಬರೀ ದ್ವೀಪ ಅಲ್ಲ ಅದು ತುಗೂದೀಪ ಅಂತಾ ಎಂದು ಟ್ವೀಟ್ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next