Advertisement

ವಿನಯ್ ಕುಲಕರ್ಣಿ ಮನೆಗೆ ಭೇಟಿ ನೀಡಿದ ನಟ ದರ್ಶನ್

12:06 PM Mar 01, 2021 | Team Udayavani |

ಧಾರವಾಡ : ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ನಿವಾಸಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭೇಟಿಕೊಟ್ಟು ವಿನಯ್ ಕುಟುಂಬಸ್ಥರಿಗೆ ಧೈರ್ಯ ಹೇಳಿದರು.

Advertisement

ರವಿವಾರ ತಡರಾತ್ರಿ ಇಲ್ಲಿನ ಶಿವಗಿರಿಯಲ್ಲಿರುವ ವಿನಯ್ ಅವರ ನಿವಾಸಕ್ಕೆ ಭೇಟಿಕೊಟ್ಟ ದರ್ಶನ್ ಸ್ವಲ್ಪಹೊತ್ತು ಇದ್ದು ಮರಳಿದರು. ರವಿವಾರ ಮಧ್ಯಾಹ್ನ ಬರಬೇಕಿದ್ದ ನಟ ದರ್ಶನ್ ಅಭಿಮಾನಿಗಳ ನೂಕು ನುಗ್ಗಲು ಇದ್ದ ಕಾರಣ ತಡರಾತ್ರಿ ವಿನಯ್ ನಿವಾಸಕ್ಕೆ ಭೇಟಿಕೊಟ್ಟರು.

ವಿನಯ್ ಪತ್ನಿ ಶಿವಲೀಲಾ ಕುಲಕರ್ಣಿ, ಪುತ್ರ ಹೆಮಂತ್ ಕುಲಕರ್ಣಿ, ಪುತ್ರಿ ವೈಶಾಲಿ ಸೇರಿದಂತೆ ಕುಟುಂಬ ಸದಸ್ಯರು ಇದ್ದರು.

ಧಾರವಾಡಕ್ಕೆ ಅಥವಾ ಉತ್ತರ ಕರ್ನಾಟಕಕ್ಕೆ ದರ್ಶನ ಅವರು ಬಂದಾಗಲೆಲ್ಲ ವಿನಯ್ ಕುಲಕರ್ಣಿ ಅವರ ಡೈರಿಗೆ ಭೇಟಿ ಕೊಡುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next