Advertisement

Actor Darshan: ಜೈಲಿನಲ್ಲಿ ನಟ ದರ್ಶನ್‌ ಭೇಟಿಯಾದ ವಿಜಯಲಕ್ಷ್ಮೀ

10:42 AM Aug 13, 2024 | Team Udayavani |

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ ಅವರನ್ನು ಪತ್ನಿ ವಿಜಯಲಕ್ಷ್ಮೀ ಸೋಮ ವಾರ ಭೇಟಿಯಾದರು.

Advertisement

ಮಧ್ಯಾಹ್ನ 3 ಗಂಟೆ ಸುಮಾ ರಿಗೆ ಪರಪ್ಪನ ಅಗ್ರಹಾರ ಜೈಲಿಗೆ ತಮ್ಮ ಸ್ನೇಹಿತರ ಜತೆ ಆಗಮಿಸಿದ ವಿಜಯಲಕ್ಷ್ಮೀ, ಪತಿ ದರ್ಶನ್‌ ಜತೆ ಕೆಲ ಹೊತ್ತು ಚರ್ಚಿಸಿದರು. ಬಳಿಕ ತಾವು ತಂದಿದ್ದ ಡ್ರೈಫ್ರೋಟ್ಸ್ ಹಾಗೂ ಹಣ್ಣು ಕೊಟ್ಟು ಧೈರ್ಯ ತುಂಬಿದರು. ಸುಮಾರು 1 ಗಂಟ ಗಳ ಕಾಲ ಪತಿಯೊಂದಿಗೆ ಮಾತಾಡಿದ ವಿಜಯ ಲಕ್ಷ್ಮೀ, ತರುಣ್‌ ಸುಧೀರ್‌ ಮದುವೆ ವಿಚಾರವನ್ನು ತಿಳಿಸಿದರು. ಆಗ ದರ್ಶನ್‌, ಒಳ್ಳೆಯದಾಗಲಿ ಎಂದು ಆರೈಸಿದ್ದಾರೆ ಎಂದು ತಿಳಿದು ಬಂದಿದೆ. ‌

ಪ್ರಜ್ವಲ್‌ ನೋಡಲು ಬಂದ ಅಣ್ಣ ಸೂರಜ್‌: ಅಶ್ಲೀಲ ವಿಡಿಯೋ ವೈರಲ್‌ ಹಾಗೂ ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣನನ್ನು ನೋಡಲು ವಿಧಾನ ಪರಿಷತ್‌ ಸದಸ್ಯ ಸೂರಜ್‌ ರೇವಣ್ಣ ಸೋಮವಾರ ಪರಪ್ಪನ ಅಗ್ರಹಾರ ಜೈಲಿಗೆ ಬಂದಿದ್ದರು. ಸಂಜೆ 4 ಗಂಟೆ ಸುಮಾರಿಗೆ ಬಂದಿದ್ದ ಸೂರಜ್‌, ಕೆಲ ಹೊತ್ತು ಪ್ರಜ್ವಲ್‌ ಜತೆ ಚರ್ಚಿಸಿ ವಾಪಸ್‌ ತೆರಳಿದರು.

Advertisement

Udayavani is now on Telegram. Click here to join our channel and stay updated with the latest news.

Next