Advertisement

ನಟ ಚಂದನ್‌‌ ಅಗಲುವಿಕೆ;ಪುತ್ರನನ್ನು ಕೊಂದು ಪತ್ನಿ ಆತ್ಮಹತ್ಯೆ

12:12 PM May 31, 2018 | |

ದೊಡ್ಡಬಳ್ಳಾಪುರ : ಕಿರುತೆರೆ ನಿರೂಪಕ ಹಾಗೂ ನಟ ಚಂದನ್‌ (ಚಂದ್ರಶೇಖರ್‌) ಅವರ ಅಕಾಲಿಕ ಮರಣದಿಂದ ತೀವ್ರವಾಗಿ ನೊಂದಿದ್ದ ಪತ್ನಿ ಮೀನಾ  ಕತ್ತು ಕೊಯ್ದು ಪುತ್ರನನ್ನು ಹತ್ಯೆಗೈದು ಬಳಿಕ ತಾನು ಆ್ಯಸಿಡ್‌ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ  ಹೃದಯ ವಿದ್ರಾವಕ ಘಟನೆ ಗುರುವಾರ ನಡೆದಿದೆ. 

Advertisement

ಮೇ 24 ರಂದು ದಾವಣಗೆರೆ ಬಳಿ ನಡೆದ ರಸ್ತೆ ಅಪಘಾತದಲ್ಲಿ  ಚಂದನ್‌ ಮೃತಪಟ್ಟಿದ್ದರು. 

ಪತಿಯ ಅಗಲುವಿಕೆಯ ನೋವಿನಲ್ಲಿದ್ದ ಮೀನಾ(38) ಇಂದು ಬೆಳಗ್ಗೆ ಏಕಾಏಕಿ 13 ವರ್ಷದ ಪುತ್ರ ತುಷಾರ್‌ನನ್ನು ಕತ್ತು ಕೊಯ್ದು ಹತ್ಯೆಗೈದು ಬಳಿಕ ತಾನು ಆ್ಯಸಿಡ್‌ ಸೇವಿಸಿದ್ದಾರೆ. ಪುತ್ರ ಸಾವನ್ನಪ್ಪಿದ್ದು, ಮೀನಾ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಳಿಕ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ತರಲಾಗಿದ್ದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು  ಸಂಜೆ ಕೊನೆಯುಸಿರೆಳೆದಿದ್ದಾರೆ.

ಕಾರ್ಯಕ್ರಮವೊಂದಕ್ಕೆ ಕಾರಿನಲ್ಲಿ ನಾಲ್ವರು ಬೆಂಗಳೂರು ಕಡೆಯಿಂದ ಹುಬ್ಬಳ್ಳಿಗೆ ತೆರಳುತ್ತಿದ್ದಾಗ ದಾವಣಗೆರೆ ಸಮೀಪದ ಹನಗವಾಡಿ ಗ್ರಾಮದ ಹೆದ್ದಾರಿ ಬಳಿ ರಸ್ತೆ ಬದಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದು ನಡೆದ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಚಂದನ್‌ ಸೇರಿದಂತೆ ಇಬ್ಬರು ಮೃತಪಟ್ಟು, ಇನ್ನಿಬ್ಬರು ತೀವ್ರವಾಗಿ ಗಾಯಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next