Advertisement

ಷರತ್ತುಗಳೊಂದಿಗೆ ಸ್ಪರ್ಧೆಗೆ ಒಪ್ಪಿದ ನಟ ಅಂಬರೀಷ್‌

07:20 AM Apr 20, 2018 | Team Udayavani |

ಬೆಂಗಳೂರು: ಮನೆ ಬಾಗಿಲಿಗೆ ಕಾಂಗ್ರೆಸ್‌ ಬಿ ಫಾರಂ ತಲುಪಿಸಿದರೂ ಸ್ಪರ್ಧೆಗೆ ಷರತ್ತು ವಿಧಿಸುವ ಮೂಲಕ ನಟ ಅಂಬರೀಷ್‌ ಹೈಕಮಾಂಡ್‌ಗೆ ಡಿಮ್ಯಾಂಡ್‌ ಇಟ್ಟಿದ್ದಾರೆ.

Advertisement

ಪಕ್ಷದ ನಾಯಕರು ಷರತ್ತುಗಳಿಗೆ ಸಮ್ಮತಿ ಸೂಚಿಸಿರುವುದರಿಂದ ಅಂಬರೀಷ್‌ ಮಂಗಳವಾರ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಂಡ್ಯ ಜಿಲ್ಲೆಯಲ್ಲಿ ಚಲುವರಾಯಸ್ವಾಮಿ ಕಾಂಗ್ರೆಸ್‌ ಸೇರ್ಪಡೆಯಾಗಿರುವುದರಿಂದ ಮುಂದೆ ಪಕ್ಷ ಅಧಿಕಾರಕ್ಕೆ ಬಂದರೆ ತಮ್ಮನ್ನು ಕಡೆಗಣಿಸಬಾರದು ಎಂದು ಪರಮೇಶ್ವರ್‌ ಅವರಿಗೆ ಅಂಬರೀಷ್‌ ತಾಕೀತು ಮಾಡಿದ್ದಾರೆಂದು ತಿಳಿದು ಬಂದಿದೆ.ಆದರೆ, ಈ ಬಗ್ಗೆ ಮಾಧ್ಯಮ ಗಳಿಗೆ ಪ್ರತಿಕ್ರಿಯಿಸಲು ಅಂಬರೀಷ್‌ ನಿರಾಕರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next