Advertisement

ಡಿಕೆಶಿ ಪದಗ್ರಹಣ ಕಣ್ತುಂಬಿಕೊಂಡ ಕಾರ್ಯಕರ್ತರು

05:26 AM Jul 03, 2020 | Lakshmi GovindaRaj |

ಮೈಸೂರು: ನಗರ ಸೇರಿದಂತೆ ಜಿಲ್ಲೆಯ ಸಹಸ್ರಾರು ಕಾಂಗ್ರೆಸ್‌ ಕಾರ್ಯಕರ್ತರು ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್‌ ಅಧಿಕಾರ ಸ್ವೀಕಾರ ಸಮಾರಂಭ ನೇರ ಪ್ರಸಾರ ವೀಕ್ಷಣೆ ಜತೆಗೆ ಏಕಕಾಲದಲ್ಲಿ ಡಿ.ಕೆ.ಶಿವಕುಮಾರ್‌  ಅವರೊಂದಿಗೆ ಪ್ರತಿಜ್ಞಾವಿಧಿ ಸ್ವೀಕರಿಸಿದರು.

Advertisement

ನಗರದ ಕಾಂಗ್ರೆಸ್‌ ಕಚೇರಿ ಸೇರಿದಂತೆ ಜಿಲ್ಲೆಯ 260ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಡಿ.ಕೆ.ಶಿವಕುಮಾರ್‌ ಅಧಿಕಾರ ಸ್ವೀಕಾರ ಕಾರ್ಯಕ್ರಮವನ್ನು ಕಣ್ತುಂಬಿಕೊಂಡು ಜೈಕಾರ ಕೂಗಿ ಸಂಭ್ರಮ  ಆಚರಿಸಿದರು. ಕಾಂಗ್ರೆಸ್‌ ಭವನದ ವೇದಿಕೆ ಮುಂಭಾಗದಲ್ಲಿ ಎರಡು ಬೃಹತ್‌ ಪರದೆ ಅಳವಡಿಸಲಾಗಿತ್ತು.

ಒಂದರಲ್ಲಿ ಜೂಮ್‌ ಆ್ಯಪ್‌ ಮೂಲಕ ಲೈವ್‌ ಕಾರ್ಯಕ್ರಮ ಹಾಗೂ ಇನ್ನೊಂದರಲ್ಲಿ ಟಿವಿ ಚಾನಲ್‌ ಗಳಲ್ಲಿ ಬಿತ್ತರವಾಗುತ್ತಿದ್ದ ನೇರ  ಪ್ರಸಾರ ಕಾರ್ಯಕ್ರಮವೂ ಪ್ರದರ್ಶಿಸಲಾಯಿತು.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಡಾ.ವಿಜಯಕುಮಾರ್‌ ಸಂವಿಧಾನದ ಪೀಠಿಕೆ ಹಾಗೂ ನಗರ ಘಟಕದ ಅಧ್ಯಕ್ಷ ಆರ್‌.ಮೂರ್ತಿ ಪ್ರತಿಜ್ಞಾ ವಿಧಿ ಬೋಧಿಸಿದರು. ಸಮಾರಂಭದಲ್ಲಿ ಮಾಜಿ ಸಂಸದ ಕಾಗಲವಾಡಿ ಎಂ. ಶಿವಣ್ಣ, ಮಾಜಿ ಶಾಸಕ ವಾಸು, ಕೆಪಿಸಿಸಿ ವಕ್ತಾರರಾದ ವೆಂಕಟೇಶ್‌, ಲಕ್ಷ್ಮಣ, ಮಂಜುಳಾ ಮಾನಸ, ಮುಖಂಡರಾದ ಆತ್ಮಾನಂದ, ಶಿವಣ್ಣ, ಶಂಕರೇಗೌಡ, ಪುಷ್ಪಲತಾ ಚಿಕ್ಕಣ್ಣ ಇತರರು ಭಾಗವಹಿಸಿದ್ದರು.

ವಿಶೇಷ ಪೂಜೆ: ನಗರದ ಅಗ್ರಹಾರ ವೃತ್ತದಲ್ಲಿರುವ 101 ಗಣಪತಿ ದೇವಸ್ಥಾನದಲ್ಲಿ ಡಿಕೆಶಿ ಅಭಿಮಾನಿ ಬಳಗದ ಅಧ್ಯಕ್ಷ ಹಾಗೂ ಕಾಂಗ್ರೆಸ್‌ ಮುಖಂಡ ಶ್ರೀನಾಥ್‌ ಬಾಬು, ವಿಶೇಷ ಪೂಜೆ ಸಲ್ಲಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next