Advertisement

ಕಾರ್ಯಕರ್ತರ ಉತ್ಸಾಹದಿಂದ ಪಕ್ಷ ಬಲಿಷ್ಠ: ಸಚಿವ ಖಾದರ್‌

12:43 PM Oct 27, 2017 | Team Udayavani |

ಕೊಣಾಜೆ: ಮಂಗಳೂರು ಕ್ಷೇತ್ರ ವ್ಯಾಪ್ತಿಯ ಗ್ರಾಮ ಗ್ರಾಮಗಳಲ್ಲಿ ಕಾಂಗ್ರೆಸ್‌ ಪಕ್ಷವನ್ನು ಸಂಘಟಿಸುವುದರೊಂದಿಗೆ ಮನೆ ಮನೆಗೆ ತೆರಳಿ ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರಕಾರದ ಅಭಿವೃದ್ಧಿ ಯೋಜನೆಗಳನ್ನು ತಿಳಿಸುವ ಕಾರ್ಯ ನಡೆಯುತ್ತಿದ್ದು, ಕ್ಷೇತ್ರ ವ್ಯಾಪ್ತಿಯ ಕಾರ್ಯಕರ್ತರ ಉತ್ಸಾಹದಿಂದ ಮುಂದಿನ ದಿನಗಳಲ್ಲಿ ಪಕ್ಷ ಇನ್ನಷ್ಟು ಬಲಶಾಲಿಯಾಗಲಿದೆ ಎಂದು ಆಹಾರ ಮತ್ತು ನಾಗರಿಕ ಸಚಿವ ಯು.ಟಿ. ಖಾದರ್‌ ಅಭಿಪ್ರಾಯಪಟ್ಟರು.

Advertisement

ಮಂಗಳೂರು ವಿಧಾನ ಸಭಾ ಕ್ಷೇತ್ರದ ಕೊಣಾಜೆ ಗ್ರಾಮದ ಒಂದನೇ ವಾರ್ಡ್‌ನಲ್ಲಿ ಮನೆ ಮನೆಗೆ ಕಾಂಗ್ರೆಸ್‌ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಉಳ್ಳಾಲ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಂತೋಷ್‌ ಶೆಟ್ಟಿ ಅಸೈಗೋಳಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್‌ ರೆಹಮಾನ್‌ ಕೊಣಾಜೆ, ಗ್ರಾಮ ಪಂಚಾಯತ್‌ ಅಧ್ಯಕ್ಷ ಶೌಕತ್‌ ಅಲಿ, ಸದಸ್ಯ ಅಚ್ಯುತ ಗಟ್ಟಿ ಕೆಳಗಿನ ಮನೆ, ಎಪಿಎಂಸಿ ಉಪಾಧ್ಯಕ್ಷೆ ಮುತ್ತು ಶೆಟ್ಟಿ, ತಾಲೂಕು ಪಂಚಾಯತ್‌ ಸದಸ್ಯೆ ಪದ್ಮಾವತಿ ಪೂಜಾರಿ, ಕಾಂಗ್ರೆಸ್‌ ಬೂತ್‌ ಅಧ್ಯಕ್ಷ ಇಕ್ಬಾಲ್‌, ಝಕರಿಯಾ ಮಲಾರ್‌, ಅಬ್ದುಲ್‌ ರೆಹಮಾನ್‌, ಅಬೂಬಕ್ಕರ್‌ ಕೆ.ಎಸ್‌. ಮಹಮ್ಮದ್‌ ಕೆ.ಟಿ. ಉಸ್ಮಾನ್‌, ರಝಾಕ್‌, ಬೂಬ ಗಟ್ಟಿ, ಅಬ್ದುಲ್‌ ಅಝೀಝ್, ಪದ್ಮನಾಭ ಗಟ್ಟಿ ಕೆಳಗಿನ ಮನೆ, ಅಬ್ದುಲ್‌ ಖಾದರ್‌, ಹಸನ್‌ ಕುಂಞಿ, ಎ.ಕೆ. ರೆಹಮಾನ್‌, ಮಹಮ್ಮದ್‌ ಕೆ.ಎಂ, ಮಹಮ್ಮದ್‌ ಇರ್ಷಾದ್‌, ರಿಝಾÌನ್‌, ರಾಮ
ಚಂದ್ರ, ಸಿರಾಜ್‌ ಕಿನ್ಯ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next