Advertisement

ಅಭಿಯಾನದಲ್ಲಿ ಸಕ್ರಿಯರಾಗಿ: ಸುರೇಶ್‌ ಕುಮಾರ್‌ ಶೆಟ್ಟಿ

08:51 PM Aug 01, 2019 | Sriram |

ಕುಂಬಳೆ: ಪಕ್ಷದ ಕಾರ್ಯಕರ್ತರು ಪಕ್ಷದ ಸದಸ್ಯತ್ವ‌ ಅಭಿಯಾನದಲ್ಲಿ ಸಕ್ರಿಯರಾಗಬೇಕೆಂದು . ಬಿಜೆಪಿ ರಾಜ್ಯ ಸಮಿತಿ ಸದಸ್ಯಪಿ.ಸುರೇಶ್‌ ಕುಮಾರ್‌ ಶೆಟ್ಟಿ ಅವರು ಹೇಳಿದರು.

Advertisement

ಪೈವಳಿಕೆ ಪಂಚಾಯತ್‌ ಬಿಜೆಪಿ ಸಮಿತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರುಅಪವಿತ್ರ ಮೈತ್ರಿ ಸರಕಾರ ಪತನಗೊಂಡು ಕರ್ನಾಟಕದಲ್ಲಿ ಅಧಿಕಾರಕೇRರಿದ ಬಿಜೆಪಿ ಸರಕಾರವನ್ನು ಅಭಿನಂದಿಸಿದರು. ಮುಂದಿನ ದಿನಗಳಲ್ಲಿ ದೇಶ ಕಾಂಗ್ರೆಸ್‌ ಮುಕ್ತ ಭಾರತವಾಗಿ ಬಿಜೆಪಿ ಇನ್ನಷ್ಟು ಬೆಳೆಯಲಿರುವುದಾಗಿ ಅವರು ಹೇಳಿದರು.

ಪಂಚಾಯತ್‌ ಬಿಜೆಪಿ ಸಮಿತಿ ಅಧ್ಯಕ್ಷ ಸದಾಶಿವ ಚೇರಾಲು ಅವರು ಅಧ್ಯಕ್ಷತೆ ಅವರು ವಹಿಸಿದ್ದರು. ತಳಮಟ್ಟದಿಂದ ಪಕ್ಷವನ್ನು ಕಟ್ಟಿ ಬೆಳೆಸಲು ಕಾರ್ಯಕರ್ತರು ಶ್ರಮಿಸಭೇಕು ಎಂದು ಅವರು ಹೇಳಿದರು. ಸಭೆಯಲ್ಲಿ ಬಿಜೆಪಿ ಕಾಸರಗೋಡು ಮಂಡಲ ಕಾರ್ಯದರ್ಶಿ ಸುಕುಮಾರ್‌ ಕುದ್ರೆ ಪ್ಪಾಡಿ,ಜಿಲ್ಲಾ ಸಮಿತಿ ಸದಸ್ಯರಾದ ಹರಿಶ್ಚಂದ್ರ ಮಂಜೇಶ್ವರ ಮತ್ತು ಪ್ರಸಾದ್‌ ರೈ ಕಯ್ನಾರ್‌,ರಾಜ್ಯ ಕೌನ್ಸಿಲ್‌ ಸಮಿತಿ ಸದಸ್ಯೆ ಸರೋಜಾ ಆರ್‌ ಬಲ್ಲಾಳ್‌, ಮಹಿಳಾ ಮೋರ್ಚಾ ಪಂಚಾಯತ್‌ ಸಮಿತಿ ಅಧ್ಯಕ್ಷೆ ಭವ್ಯಾ ಬಾಯಾರು ಗ್ರಾಮ ಪಂಚಾಯತ್‌ ಸದಸ್ಯೆ ರಾಜೀವಿ ಅವರು ಭಾಗವಹಿಸಿದರು.

ಸಭೆಯಲ್ಲಿ ಪಂಚಾಯತ್‌ ಸಮಿತಿಗೆ ಉಪಾಧ್ಯಕ್ಷರಾಗಿ ಸತೀಶ್‌ ಶೆಟ್ಟಿ ಕುಡಾಲು ಮತ್ತು ಕಾರ್ಯದರ್ಶಿಯಾಗಿ ಜಯಶಂಕರ್‌ ಕುಡಾಲು ಅವರನ್ನು ನೇಮಕಗೊಳಿ ಸಲಾಯಿತು. ಎಚ್‌.ಸುಬ್ರಹ್ಮಣ್ಯ ಭಟ್‌ ಸ್ವಾಗತಿಸಿದರು. ಜಯಶಂಕರ್‌ ವಂದಿಸಿದರು. ಸುಂದರ ಶೆಟ್ಟಿ ಕಳಾಯಿ ಕಾರ್ಯಕ್ರಮ ನಿರೂಪಿಸಿದರು.

ಬಿಜೆಪಿಯತ್ತ ಆಕರ್ಷ‌ಣೆ
ಕೇಂದ್ರ ಎನ್‌ಡಿಎ ಸರಕಾರ ಆಡಳಿತವನ್ನು ಮೆಚ್ಚಿ ಆನೇಕ ಮಂದಿ ಬಿಜೆಪಿಯತ್ತ ಆಕರ್ಷಿತಚ ರಾಗುತ್ತಿದ್ದಾರೆ ಎಂದ ಸುರೇಶ್‌ ಕುಮಾರ್‌ ಅನ್ಯ ಪಕ್ಷ ಗಳನ್ನು ‌ ತೊರೆದು ಹಲವರು ಬಿಜೆಪಿ ಸದಸ್ಯತ್ವ ಸ್ವೀಕರಿಸುತಿದ್ದಾರೆ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next