ಕಾಣಿಯೂರು ಸಮೀಪ ಕೂಡುರಸ್ತೆ ಎಂಬಲ್ಲಿ ಆ್ಯಕ್ಟಿವಾ ಮತ್ತು ಲಾರಿ ಮಧ್ಯೆ ಢಿಕ್ಕಿ ಸಂಭವಿಸಿತ್ತು. ಘಟನೆಯಿಂದ ಆ್ಯಕ್ಟಿವಾ ಸವಾರ ಗಾಯಗೊಂಡಿದ್ದಾರೆ. ಗಾಯಾಳುವನ್ನು ಸ್ಥಳೀಯ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಯಿತು. ಈ ಸಂದರ್ಭದಲ್ಲಿ ಜತೆಗೆ ಇದ್ದ ಲಾರಿ ಚಾಲಕ ಈಗ ಬರುತ್ತೇನೆ ಎಂದು ಹೇಳಿ ಪರಾರಿಯಾಗಲು ಯತ್ನಿಸಿದ್ದ. ಇದನ್ನು ಗಮನಿಸಿದ ರಿಕ್ಷಾ ಚಾಲಕರು ಪರಾರಿಯಾದ ಲಾರಿ ಚಾಲಕನನ್ನು ಪಂಜ ಸಮೀಪ ಹಿಡಿದು ಕಾಣಿಯೂರಿಗೆ ವಾಪಸ್ ಕರೆ ತಂದಿದ್ದಾರೆ.
Advertisement
ಗಾಯಗೊಂಡ ಆ್ಯಕ್ಟಿವಾ ಸವಾರ ಶೀನಪ್ಪ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.