Advertisement

Farmer ಉತ್ಪಾದಕ ಕಂಪೆನಿಗಳ ಉತ್ತೇಜನಕ್ಕೆ ಕ್ರಮ: ಸಚಿವ ಸುಧಾಕರ್‌

12:14 AM Dec 16, 2023 | Team Udayavani |

ಬೆಳಗಾವಿ: ರಾಜ್ಯದಲ್ಲಿ ಸುಮಾರು 1,262 ರೈತ ಉತ್ಪಾದಕ ಕಂಪೆನಿ ಗ ಳಿ ದ್ದು ಇವುಗಳ ನಿರ್ವಹಣೆಗೆ 2 ಕೋಟಿ ರೂ.ನೀಡಲಾಗಿದೆ. ಎಫ್‌ಪಿಒಗಳ ಉತ್ತೇಜನಕ್ಕೆ ಸರಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ| ಎಂ.ಸಿ.ಸುಧಾಕರ್‌ ಹೇಳಿದರು.

Advertisement

ವಿಧಾನಸಭೆ ಪ್ರಶ್ನೋತ್ತರ ಕಲಾಪದಲ್ಲಿ ಶಾಸಕ ಸುನೀಲ್‌ ಕುಮಾರ್‌ ಅವರ ಪ್ರಶ್ನೆಗೆ ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಪರವಾಗಿ ಉತ್ತರಿಸಿದ ಸಚಿವ ಡಾ| ಎಂ.ಸಿ.ಸುಧಾಕರ್‌, ಎಫ್‌ಪಿಒಗಳು ಸುಮಾರು 881.52 ಕೋಟಿ ರೂ.ಗಳ ವಹಿವಾಟು ನಡೆಸಿವೆ. ಕೇಂದ್ರದ ಅಮೃತ ಯೋಜನೆ ಅಡಿಯಲ್ಲಿ 6 ಕೋಟಿ ರೂ. ಅನುದಾನ ರಾಜ್ಯಕ್ಕೆ ಬಂದಿದೆ. ಸದಸ್ಯರ ಬೇಡಿಕೆಯಂತೆ ಎಫ್‌ಪಿಒಗಳಿಗೆ ನೀಡುವ ಆರ್ಥಿಕ ನೆರವಿನ ಸೌಲಭ್ಯ ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next