Advertisement

ಸಮಾಜದ ಶಾಂತಿ ಕದಡಿದರೆ ಕ್ರಮ: ಎಎಸ್ಪಿ

01:08 PM Apr 10, 2022 | Team Udayavani |

ವಾಡಿ: ವೈಯಕ್ತಿಕ ದ್ವೇಷ ಸಮಾಜದ ಅಶಾಂತಿಗೆ ಕಾರಣವಾದರೆ, ಅಂತಹ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಪ್ರಸನ್ನಕುಮಾರ ದೇಸಾಯಿ ಎಚ್ಚರಿಕೆ ನೀಡಿದರು.

Advertisement

ಲಾಡ್ಲಾಪುರ ಗ್ರಾಮದಲ್ಲಿ ವಾಡಿ ಪೊಲೀಸ್‌ ಠಾಣೆ ವತಿಯಿಂದ ಏರ್ಪಡಿಸಲಾಗಿದ್ದ “ಮನೆ ಬಾಗಿಲಿಗೆ ಪೊಲೀಸ್‌’ ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಎಲ್ಲ ಧರ್ಮಿಯ ಜನರು ಕೋಮು ಸೌಹಾರ್ದತೆಯಿಂದ ಬದುಕಿದರೆ ಊರೊಂದು ಶಾಂತಿ ತೋಟವಾಗುತ್ತದೆ. ಸಣ್ಣಪುಟ್ಟ ಗಲಾಟೆಗಳು ಗ್ರಾಮಸ್ಥರ ಸೌಹಾರ್ದತೆಗೆ ಧಕ್ಕೆ ಉಂಟಾಗಬಾರದು. ಕ್ಷುಲ್ಲಕವಾದ ಜಗಳಗಳು ಹಿರಿಯರ ಸಂಧಾನದಲ್ಲೇ ಕೊನೆಗಾಣಬೇಕು. ಇದನ್ನು ಮೀರಿದರೆ ಠಾಣೆಗೆ ದೂರು ನೀಡುವ ಮೂಲಕ ಕಾನೂನು ಪಾಲಿಸಬೇಕು. ಯಾವುದೇ ಕಾರಣಕ್ಕೂ ಭಾವೋದ್ವೇಗಕ್ಕೊಳಗಾಗಿ ಕಾನೂನು ಕೈಗೆತ್ತಿಕೊಳ್ಳಬಾರದು. ಪ್ರತಿಯೊಂದು ಸಮಸ್ಯೆಗೂ ಕಾನೂನಿನಲ್ಲಿ ಪರಿಹಾರವಿದೆ. ಸಹೋದರತ್ವ ಭಾವದಿಂದ ಬಾಳುವ ಮೂಲಕ ಇತರರಿಗೆ ಮಾದರಿಯಾಗಬೇಕು ಎಂದು ಹೇಳಿದರು.

ಊರಿನಲ್ಲಿ ಯಾರಾದರೂ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದು ಕಂಡು ಬಂದರೆ ಅಥವಾ ಅಮಾಯಕರ ಮೇಲೆ ದೌರ್ಜನ್ಯ ಎಸಗುತ್ತಿದ್ದರೆ, ಸಾಮಾಜಿಕ ವಾತಾವರಣ ಹದಗೆಡಿಸುತ್ತಿದ್ದರೆ ತಕ್ಷಣ ಪೊಲೀಸ್‌ ಠಾಣೆಗೆ ದೂರು ಕೊಡಿ. ದೂರು ಕೊಟ್ಟವರ ಹೆಸರನ್ನು ನಾವು ಯಾವುದೇ ಕಾರಣಕ್ಕೂ ಬಹಿರಂಗಪಡಿಸುವುದಿಲ್ಲ. ಸಾರ್ವಜನಿಕರ ಸಹಕಾರವಿದ್ದರೆ ಮಾತ್ರ ಪೊಲೀಸರು ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ. ಸಮಾಜಘಾತುಕರನ್ನು ಜನರ ಮಧ್ಯೆ ಇರಲು ಬಿಟ್ಟರೆ ಆಪತ್ತು ತಂದಿಡುತ್ತಾರೆ. ಅಂಥಹವರಿಗೆ ಕಾನೂನು ಪಾಠ ಕಲಿಸುತ್ತದೆ ಎಂದು ಹೇಳಿದರು.

ಅಪಘಾತ, ಬಾಲ್ಯ ವಿವಾಹ, ವಾಹನ ಚಾಲಕರ ಮದ್ಯ ಸೇವನೆ, ಪುಂಡಾಟಿಕೆ, ಹಣಕಾಸು ವ್ಯವಹಾರ, ಮಟಕಾ, ಗಾಂಜಾ ಮಾರಾಟದಂತ ಕಾನೂನುಬಾಹೀರ ಚಟುವಟಿಕೆಗಳ ಕುರಿತು ತಿಳಿ ಹೇಳಿದರು.

Advertisement

ಸಿಪಿಐ ಚಂದ್ರಕಾಂತ ಯಾತನೂರ, ಪಿಎಸ್‌ಐ ಮಹಾಂತೇಶ ಜಿ.ಪಾಟೀಲ, ಗ್ರಾಪಂ ಅಧ್ಯಕ್ಷೆ ಸೋನಿಬಾಯಿ ರಾಠೊಡ, ಉಪಾಧ್ಯಕ್ಷ ಬಸವರಾಜಗೌಡ ಮಾಲಿಪಾಟೀಲ, ಮುಖಂಡರಾದ ನಾಗೇಂದ್ರಪ್ಪ ಮುಕ್ತೇದಾರ, ವೀರೇಶ ಕೊಂಚೂರು, ಗೋವಿಂದಪ್ಪ, ಸಾಬಣ್ಣ ಆನೇಮಿ, ವಿಶ್ವನಾಥ ಗಂದಿ, ಶ್ಯಾಮಸುಂದರ ರೆಡ್‌ಸನ್‌, ಗುಂಡುಗೌಡ ಪಾಟೀಲ, ಈರಣ್ಣ ಮಲಕಂಡಿ, ದೊಡ್ಡಪ್ಪಗೌಡ ಪೊಲೀಸ್‌ ಪಾಟೀಲ, ಸಾಬಣ್ಣ ಗೊಡಗ, ನಾಗಣ್ಣ ಹೂಗಾರ, ಚಂದಪ್ಪ ಲಕಬಾ, ತಳಜಾರಾಮ ರಾಠೊಡ, ಸುಬ್ಬಣ್ಣ ಭೋವಿ ಹಾಗೂ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು. ಪಿಡಿಒ ಕಲ್ಯಾಣಿ ಕೊಳ್ಳದ್‌ ಸ್ವಾಗತಿಸಿದರು, ಶಾಂತಕುಮಾರ ಎಣ್ಣಿ ನಿರೂಪಿಸಿದರು, ಮಲ್ಲಮ್ಮ ಕುಂಬಾರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next