Advertisement

ಪಿಎಂಒ ಮೂಲಕವೇ ರಾಯಭಾರಿ, ಹೈಕಮಿಷನರ್‌ ನೇಮಕಕ್ಕೆ ಕ್ರಮ

12:29 AM Oct 03, 2020 | mahesh |

ಹೊಸದಿಲ್ಲಿ: ಭಾರತದ ನೆರೆಯ ರಾಷ್ಟ್ರಗಳಿಗೆ ರಾಯಭಾರಿಗಳನ್ನು ಮತ್ತು ಹೈಕಮಿಷನರ್‌ಗಳ ಆಯ್ಕೆಯಲ್ಲಿ ಖುದ್ದು ಪ್ರಧಾನಮಂತ್ರಿಗಳ ಕಚೇರಿಯೇ ಮೇಲುಸ್ತುವಾರಿ ವಹಿಸಿಕೊಂಡಿದೆ. ವಿದೇಶಾಂಗ ಇಲಾಖೆ ಈ ಅಂಶವನ್ನು ಸಾರ್ವ ಜನಿಕವಾಗಿ ಒಪ್ಪಿಕೊಳ್ಳದಿದ್ದರೂ, ಪಿಎಂಒದ ಆಯ್ಕೆ ಎದ್ದು ಕಾಣುತ್ತಿದೆ. ಬಾಂಗ್ಲಾದೇಶ ರಾಜಧಾನಿ ಢಾಕಾದಲ್ಲಿ ಹೈಕಮಿಷನರ್‌ ಆಗಿ ಅಧಿಕಾರ ವಹಿಸಿಕೊಂಡಿರುವ ಐಎಫ್ಎಸ್‌ ಅಧಿಕಾರಿ ವಿಕ್ರಂ ದೊರೆಸ್ವಾಮಿ, ಅಫ್ಘಾನಿಸ್ಥಾನ ರಾಜಧಾನಿ ಕಾಬೂಲ್‌ನಲ್ಲಿರುವ ಭಾರತದ ರಾಯಭಾರಿಯಾಗಿ ನೇಮಕ ಗೊಂಡ ರುದ್ರೇಂದ್ರ ಟಂಡನ್‌ ಅವರು ಪ್ರಧಾನ ಮಂತ್ರಿಗಳ ಕಚೇರಿಯಲ್ಲಿದ್ದವರೇ.

Advertisement

ಈ ಪಟ್ಟಿಗೆ ಸೇರ್ಪಡೆ ಇನ್ನೂ ಹಲವಿದೆ. ನೇಪಾಲ ರಾಜಧಾನಿ ಕಠ್ಮಂಡುವಿನಲ್ಲಿ ಭಾರತದ ರಾಯಭಾರಿ ಯಾಗಿರುವ ವಿನಯ ಮೋಹನ್‌ ಕ್ವತ್ರಾ ಅವರು ಪ್ರಧಾನಿ ಮೋದಿಯವರಿಗೆ ಜಂಟಿ ಕಾರ್ಯ ದರ್ಶಿಯಾಗಿದ್ದರು. ಕೊಲೊಂಬೋದಲ್ಲಿ ಭಾರತದ ಹೈಕಮಿ ಷನರ್‌ ಆಗಿರುವ ಗೋಪಾಲ ಬಾಗ್ಲೆ, ಇಸ್ಲಾಮಾಬಾದ್‌ನಲ್ಲಿರುವ ಭಾರತದ ಹೈಕಮಿಷನರ್‌ ಆಗಿದ್ದ ಅಜಯ ಬೆಸಾರಿಯಾ ಕೂಡ ಪ್ರಧಾನಮಂತ್ರಿ ಗಳ ಕಚೇರಿಯಲ್ಲಿ ಉನ್ನತ ಹುದ್ದೆಗಳನ್ನು ನಿರ್ವಹಿಸಿದವರೇ. ವಿವಿಧ ಸಚಿವಾಲ ಯಗಳಲ್ಲಿ ಕೆಲಸ ಮಾಡಿ, ವಿಸ್ತೃತ ಕಾರ್ಯಾನುಭವ ಹೊಂದಿದವರಿಗೆ ನೆರೆಯ ದೇಶಗಳಲ್ಲಿರುವ ದೇಶದ ರಾಯಭಾರ, ಹೈಕಮಿಷನ್‌ ಕಚೇರಿಗಳಿಗೆ ಆದ್ಯತೆ ನೀಡಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next