Advertisement

ಮಾರ್ಗಸೂಚಿ ಉಲ್ಲಂಘಿಸಿದರೆ ಕ್ರಮ

04:17 PM May 08, 2021 | Team Udayavani |

ಚಿಕ್ಕಮಗಳೂರು: ಕೋವಿಡ್‌ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ವ್ಯಾಪಾರ-ವಹಿವಾಟು ನಡೆಸುತ್ತಿದ್ದವರು ಮತ್ತು ಅನಗತ್ಯ ಸಂಚಾರ ನಡೆಸುವರಿಗೆ ಎಚ್ಚರಿಕೆ ನೀಡಿ ದಂಡ ವಿಧಿಸಲಾಗಿದೆ. ಇದು ಪುನರಾವರ್ತನೆಯಾದರೆ ಅಂತಹ ಅಂಗಡಿಗಳನ್ನು ಸೀಲ್‌ಡೌನ್‌ ಮಾಡುವುದಾಗಿ ಉಪ ವಿಭಾಗಾಧಿಕಾರಿ ಡಾ|ಎಚ್‌.ಎಲ್‌. ನಾಗರಾಜ್‌ ಎಚ್ಚರಿಸಿದರು.

Advertisement

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದಅವರು, ತಹಶೀಲ್ದಾರ್‌ ಮತ್ತು ವೃತ್ತ ನಿರೀಕ್ಷಕರುಮತ್ತು ತಾವು ನಗರದಲ್ಲಿ ಪರಿಶೀಲನೆ ನಡೆಸಿ ಅನಗತ್ಯವಾಗಿ ತಿರುಗಾಡುವರಿಗೆ ಮತ್ತುಅಂಗಡಿಗಳ ಮೇಲೆ ದಾಳಿ ನಡೆಸಿ ದಂಡ ವಿಧಿಸಲಾಗಿದೆ ಎಂದರು.

ಸರ್ಕಾರ ಅಗತ್ಯ ವಸ್ತು ಖರೀದಿಗೆ ಅವಕಾಶ ನೀಡಿದ್ದು, ಅಂಗಡಿ ಮುಂದೆಗುಂಪಾಗಿ ವ್ಯಾಪಾರ- ವಹಿವಾಟು ನಡೆಸುತ್ತಿದ್ದದ್ದುಕಂಡು ಬಂದಿದ್ದು, ಅಂತಹ ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಲಾಗಿದೆ. ಇನ್ನು ಕೆಲವು ಅಂಗಡಿಮಾಲೀಕರು ಕದ್ದುಮುಚ್ಚಿ ವ್ಯಾಪಾರ ನಡೆಸುತ್ತಿದ್ದುಅಂಗಡಿ ಮುಂದೆ ಮೊಬೈಲ್‌ ನಂಬರ್‌ಗಳನ್ನುಹಾಕಲಾಗಿದ್ದು ಅದನ್ನು ತೆರವುಗೊಳಿಸಲಾಗಿದೆ ಎಂದು ತಿಳಿಸಿದರು.

ಭಿಕ್ಷುಕರು ಮತ್ತು ಅನಾಥ ವ್ಯಕ್ತಿಗಳು ಮಾಸ್ಕ್ ಧರಿಸದೇ ಗುಂಪಿನ ನಡುವೆಓಡಾಡುತ್ತಿರುವುದು ಕಂಡು ಬಂದಿದ್ದು, ಅಂತಹ ವ್ಯಕ್ತಿಗಳನ್ನು ಪತ್ತೆಹಚ್ಚಿ ಅವರನ್ನುನಿರಾಶ್ರಿತರ ಕೇಂದ್ರಕ್ಕೆ ಬಿಡುವಂತೆ ನಗರಸಭೆ ಆಯುಕ್ತರಿಗೆ ಸೂಚಿಸಲಾಗಿದೆಎಂದರು.

ಜಿಲ್ಲೆಯಲ್ಲಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆ ಸೇರಿದಂತೆ 13 ಆಸ್ಪತ್ರೆಗಳಲ್ಲಿ 343 ಬೆಡ್‌ ಖಾಲಿಇವೆ. ಜನರಲ್‌ ವಾಡ್‌ಗಳಲ್ಲಿ 94 ಬೆಡ್‌, 132 ಆಕ್ಸಿಜನ್‌ ಬೆಡ್‌, 25 ಐಸಿಯು ಬೆಡ್‌, 29ಐಸಿಯು ಮತ್ತು ವೆಂಟಿಲೇಟರ್‌ ಬೆಡ್‌ ಖಾಲಿಇವೆ ಎಂದು ತಿಳಿಸಿದರು.

Advertisement

ಜಿಲ್ಲೆಯಲ್ಲಿರುವ ಕೆಆರ್‌ಎಸ್‌ ಆಸ್ಪತ್ರೆ, ಆಶ್ರಯ ಆಸ್ಪತ್ರೆ, ಹೋಲಿಕ್ರಾಸ್‌ ಆಸ್ಪತ್ರೆ, ಅನ್ನಪೂರ್ಣ ಆಸ್ಪತ್ರೆ, ವಾತ್ಸಲ್ಯ ಆಸ್ಪತ್ರೆ, ಚೇತನಾ ಮತ್ತು ಬಾಲಾಜಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವರದಿ ಸಿದ್ಧಪಡಿಸಿ ಜಿಲ್ಲಾ ಧಿಕಾರಿಗಳಿಗೆಸಲ್ಲಿಸಲಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಎಷ್ಟುಹಾಸಿಗೆ ಇದೆ. ಎಷ್ಟು ಹಾಸಿಗೆ ಕೋವಿಡ್‌ಗೆಮೀಸಲಿಡಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ ಎಂದರು.

ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ನವಜಾತ ಶಿಶುಗಳಿಗೆ 20ರಿಂದ 25ಬೆಡ್‌ಮೀಸಲಿಡಲಾಗಿದೆ. ಕೆಲವು ಆಸ್ಪತ್ರೆಗಳಲ್ಲಿ 100 ಬೆಡ್‌ ಕೋವಿಡ್‌ ಚಿಕಿತ್ಸೆಗೆಅನುಮತಿ ಪಡೆದಿದ್ದು, 90 ಹಾಸಿಗೆ ಹಾಕಿರುವುದುಕಂಡು ಬಂದಿದೆ. 35 ಹಾಸಿಗೆಗಳನ್ನು ಸರ್ಕಾರಕ್ಕೆಬಿಟ್ಟುಕೊಡಬೇಕೆಂದು ತಿಳಿಸಲಾಗಿದೆ. ಇದಕ್ಕೆಖಾಸಗಿ ಆಸ್ಪತ್ರೆ ಮುಖ್ಯಸ್ಥರು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.

ಆಯುಷ್ಮಾನ್‌ ಭಾರತ ಆರೋಗ್ಯ ಕರ್ನಾಟಕ(ಎಬಿಎಕೆ)ಗೆ ಇಷ್ಟು ಹಾಸಿಗೆ ಖಾಲಿ ಇವೆ. ಇಷ್ಟು ಜನರಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆಂಬಮಾಹಿತಿಯನ್ನು ಪ್ರಕಟಿಸಬೇಕು. ಚಿಕಿತ್ಸೆ ದರಪಟ್ಟಿಯನ್ನು ಪ್ರಕಟಿಸಬೇಕೆಂದು ತಿಳಿಸಲಾಗಿದೆ.ಖಾಸಗಿ ಆಸ್ಪತ್ರೆಯಲ್ಲಿ ಖಾಲಿ ಇರುವ ಹಾಸಿಗೆಮತ್ತು ಎಷ್ಟು ಹಾಸಿಗೆಯಲ್ಲಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮೇಲ್ವಿಚಾರಣೆ ನಡೆಸಲು ನೋಡೆಲ್‌ ಅಧಿ ಕಾರಿಯನ್ನು ನೇಮಿಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next