Advertisement

RuPay card: ರುಪೇ ಕಾರ್ಡ್‌ ವಿತರಣೆಗೆ ಕ್ರಮ: ಶಾಲಿನಿ ರಜನೀಶ್‌

11:37 PM Oct 11, 2023 | Team Udayavani |

ಬೆಂಗಳೂರು: ಎಲ್ಲ ಅರ್ಹ ಗ್ರಾಹಕರಿಗೂ ರುಪೇ ಕಾರ್ಡ್‌ ಸಿಗುವಂತಾಗಬೇಕು. ಸರಕಾರ ವಿತರಿಸುವ ಸಹಾಯಧನ ಹಾಗೂ ಪ್ರೋತ್ಸಾಹಧನಗಳು ನೇರವಾಗಿ ಫ‌ಲಾನುಭವಿಗಳಿಗೆ ಸಿಗಲಿವೆ. ಅಲ್ಲದೆ, ಈ ಕಾರ್ಡ್‌ನಿಂದಾಗಿ 2 ಲಕ್ಷ ರೂ.ಗಳ ವಿಮಾ ಸೌಲಭ್ಯವೂ ಸಿಗಲಿದೆ ಎಂದು ಅಭಿವೃದ್ಧಿ ಆಯುಕ್ತೆ ಶಾಲಿನಿ ರಜನೀಶ್‌ ಹೇಳಿದರು.

Advertisement

ರಾಜ್ಯ ಮಟ್ಟದ ಬ್ಯಾಂಕರುಗಳ ಸಮಿತಿ (ಎಸ್‌ಎಲ್‌ಬಿಸಿ) ಸಭೆಯಲ್ಲಿ ಮಾತನಾಡಿ. ಫ್ರೂಟ್ಸ್‌ ಇ-ಸಾಲ ಸಾಫ್ಟ್ವೇರ್‌ನೊಂದಿಗೆ ಎಲ್ಲ ರೈತರ ಆಧಾರ್‌ ಸಂಖ್ಯೆಯನ್ನು ವಿಲೀನಗೊಳಿಸಬೇಕಾಗಿದೆ. ಅದಕ್ಕಾಗಿ ಎಲ್ಲ ಬ್ಯಾಂಕ್‌ಗಳೂ ತಮ್ಮ ಬಳಿಯಿರುವ ಮಾಹಿತಿಯನ್ನು ಇ-ಆಡಳಿತ ಇಲಾಖೆಗೆ ಸಲ್ಲಿಸಬೇಕೆಂದು ಎಲ್ಲ ಇಲಾಖೆಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ ಎಂದರು.

ಡಿ. 31ರ ವರೆಗೆ ಮನೆ-ಮನೆಗೆ ಕೆಸಿಸಿ ಅಭಿಯಾನ
ವರ್ಷಾಂತ್ಯದ ವರೆಗೆ ರೈತರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ನೀಡಲು ಅಭಿಯಾನ ಕೈಗೊಳ್ಳಲಾಗುತ್ತದೆ ಎಂದು ಕೆನರಾ ಬ್ಯಾಂಕ್‌ ಕಾರ್ಯಕಾರಿ ನಿರ್ದೇಶಕ ಹದೀìಪ್‌ ಸಿಂಗ್‌ ಅಹ್ಲುವಾಲಿಯಾ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next