Advertisement

University:ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಬಾರದ ಸಿಬ್ಬಂದಿ ಮೇಲೆ ಕ್ರಮ:ಕುಲಸಚಿವ ಎಚ್ಚರಿಕೆ

10:24 AM Jan 05, 2024 | Team Udayavani |

ಬೆಂಗಳೂರು: ಸಮಯಕ್ಕೆ ಸರಿಯಾಗಿ ತಮ್ಮ ಕಚೇರಿ, ವಿಭಾಗಗಳಿಗೆ ಕರ್ತವ್ಯಕ್ಕೆ ಹಾಜರಾಗದ ಸಿಬ್ಬಂದಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಹಾಗೂ ಒಂದು ದಿನದ ರಜೆ ಕಡಿತಗೊಳಿಸಲಾಗುವುದು ಎಂದು ಬೆಂಗಳೂರು ವಿಶ್ವವಿದ್ಯಾಲಯ ತನ್ನ ಸಿಬ್ಬಂದಿಗೆ ಎಚ್ಚರಿಕೆ ನೀಡಿದೆ.

Advertisement

ವಿವಿಯ ಎಲ್ಲ ಕಚೇರಿ, ವಿಭಾಗ, ಪದವಿ, ಸ್ನಾತಕೋತ್ತರ ಪದವಿ ವಿಭಾಗಗಳ ಕೆಲಸದ ಅವಧಿ ಬೆಳಗ್ಗೆ 10ರಿಂದ ಆರಂಭವಾಗುತ್ತದೆ. ಆದರೆ, ಕಳೆದ ತಿಂಗಳು ವಿವಿಯ ವಿವಿಧ ಕಚೇರಿ, ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲಿಸಿದಾಗ ಬಹಳಷ್ಟು ಸಿಬ್ಬಂದಿಗಳು 10.30 ಆದರೂ ಕರ್ತವ್ಯಕ್ಕೆ ಹಾಜರಾಗದಿರುವುದು ಕಂಡುಬಂದಿದೆ.

ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಬಾರದ ಸಿಬ್ಬಂದಿಯ ವಿರುದ್ಧ ಆಯಾ ವಿಭಾಗದ ಮುಖ್ಯಸ್ಥರು, ನಿಯಂತ್ರಕರು ಕಾನೂನು ರೀತಿ ಕ್ರಮ ಕೈಗೊಳ್ಳಬೇಕು. ಜೊತೆಗೆ ಅವಂತಹವರ ಅರ್ಧ ದಿನದ ಸಾಂದರ್ಭಿಕ ರಜೆ ಕಡಿತಗೊಳಿಸಲಾಗುವುದು. ಇದು ಅವರು ಎಷ್ಟು ದಿನ ವಿಳಂಬವಾಗಿ ಬರುತ್ತಾರೋ ಅಷ್ಟೂ ದಿನಕ್ಕೂ ರಜೆ ಕಡಿತವಾಗುತ್ತಿರುತ್ತದೆ. ಒಂದು ವೇಳೆ ಸಾಂದರ್ಭಿಕ ರಜೆ ಸಿಬ್ಬಂದಿಗೆ ಇಲ್ಲದಿದ್ದಲ್ಲಿ ಗಳಿಕೆ ರಜೆ ಅಥವಾ ಇನ್ಯಾವುದೇ ರಜೆಯ ಒಂದು ದಿನವನ್ನು ಕಡಿತಗೊಳಿಸಲಾಗುವುದೆಂದು ಕುಲಸಚಿವರು ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next