Advertisement

ಪುರುಷೋತ್ತಮ್‌ ವಿರುದ್ಧ ಕ್ರಮಕ್ಕೆ ಆಗ್ರಹ

06:06 AM Jun 11, 2020 | Lakshmi GovindaRaj |

ಚಿಕ್ಕಬಳ್ಳಾಪುರ: ಮಂಡ್ಯದ ಕೆಆರ್‌ಎಸ್‌ ಡ್ಯಾಂ ಬಳಿ ವಿಶ್ವ ವಿಖ್ಯಾತ ಎಂಜಿನಿಯರ್‌ ಸರ್‌ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಸ್ಥಾಪಿಸಿದರೆ ನಾವು ಒಡೆದು ಹುರುಳಿಸುತ್ತೇವೆ ಎಂದು ಹೇಳಿಕೆ ನೀಡಿರುವ ಮೈಸೂರಿನ ಮಾಜಿ ಮೇಯರ್‌  ಪುರುಷೋತ್ತಮ್‌ ವಿರುದ್ಧ ಕೂಡಲೇ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ರಾಜ್ಯ ಸರ್‌ ಎಂ.ವಿ.ಕಾರ್ಮಿಕ ಸೇವಾ ಸಂಘದ ಸದಸ್ಯರು ನಗರ ಜಿಲ್ಲಾಡಳಿತ ಭವನದ ಎದುರು ಬುಧವಾರ ಧರಣಿ ನಡೆಸಿದರು.

Advertisement

ಕೆಆರ್‌ಎಸ್‌ ಡ್ಯಾಂ  ನಿರ್ಮಾಣದಲ್ಲಿ ಜಿಲ್ಲೆಯವರಾದ ವಿಶ್ವೇಶ್ವರಯ್ಯ ಪಾತ್ರ ಅಪಾರವಾಗಿದೆ. ಆದರೆ ಸರ್‌ ಎಂವಿ ಮೈಸೂರು ರಾಜ್ಯದ ದಿವಾನರಷ್ಟೆ. ದಿವಾನರಿಗೆ ಕೊಡುವ ಸಂಬಳ ರಾಜವಂಶಸ್ಥರು ಕೊಟ್ಟಿದ್ದಾರೆ. ಕೆಆರ್‌ ಎಸ್‌ ಡ್ಯಾಂ ಕಟ್ಟುವ ವಿಚಾರ  ಮಾತನಾಡುವಾಗ ಸರ್‌ ಎಂವಿಯವರು ಬರೀ ಗಾರೆ ಕೆಲಸದ ಮೇಸ್ತ್ರೀ. ಮೇಸಿOಉಯ ಹೆಸರು ಮತ್ತು ಪ್ರತಿಮೆಯನ್ನು ಕೆಆರ್‌ ಎಸ್‌ ಡ್ಯಾಂ ಬಳಿ ಇಡಲು ಸಾಧ್ಯವೇ ಎಂದು ಮಾಜಿ ಮೇಯರ್‌ ಮತ್ತಿತರರು ಉದ್ಧಟತನದಿಂದ ಮಾತನಾಡಿದ್ದಾರೆ ಎಂದು ಧರಣಿ ನಿರತರು ಆಕ್ರೋಶ  ವ್ಯಕ್ತಪಡಿಸಿದರು.

ವಿಶ್ವೇಶ್ವರಯ್ಯ ಅವರಿಗೆ ಅವಮಾನ ಆಗುವ ರೀತಿಯಲ್ಲಿ ಮಾತನಾಡಿರುವವರನ್ನು ಬಂಧಿಸಬೇಕೆಂದು ಡೀಸಿ ಹಾಗೂ ಎಸ್ಪಿಗೆ ಮನವಿ ಸಲ್ಲಿಸಿದರು. ಸರ್‌ ಎಂ.ವಿ.ಕಾರ್ಮಿಕರ ಸೇವಾ ಸಂಘದ ರಾಜ್ಯಾಧ್ಯಕ್ಷ  ಪ್ರಕಾಶ್‌ ಸಿ., ಸಾಮಾಜಿಕ ಹೋರಾಟಗಾರ ನಂದಿ ಪುರುಷೋತ್ತಮ, ಸರ್‌ ಎಂ.ವಿ.ಕಾರ್ಮಿಕರ ಸೇವಾ ಸಂಘದ ಜಿಲ್ಲಾಧ್ಯಕ್ಷ ಜಿ.ವಿ.ಮೂರ್ತಿ, ಪ್ರಧಾನ ಕಾರ್ಯದರ್ಶಿ ರಮೇಶ್‌,  ಪದಾಧಿಕಾರಿಗಳಾದ ಮುರಳಿ, ಚೌಡಪ್ಪ, ಅಂಬರೀಶ್‌, ಸ್ಟುಡಿಯೋ ಮೂರ್ತಿ, ಪ್ರಭಾವತಿ, ಮಂಜು, ಕೃಷ್ಣಪ್ಪ, ಕೃಷ್ಣಮೂರ್ತಿ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next