Advertisement

ಕಾಂಗ್ರೆಸಿಗರ ವಿರುದ್ಧ ಕ್ರಮ: ಆಯೋಗಕ್ಕೆ ಬಿಜೆಪಿ ದೂರು

10:59 AM Apr 06, 2019 | Team Udayavani |

ಬೆಂಗಳೂರು: ಕೆ.ಆರ್‌.ಪುರದಲ್ಲಿ ನಡೆದ ಕಾಂಗ್ರೆಸ್‌ ಸ್ಥಳೀಯ ನಾಯಕರ ಸಭೆಯಲ್ಲಿ ಧಾರ್ಮಿಕ ಭಾವನೆ ಕೆರಳಿಸುವ ಮತ್ತು ಮತದಾನದ ಹಕ್ಕು ಕಸಿಯುವಂತಹ ಅಹಿತಕರ ಘಟನೆಗಳ ಮುನ್ನೋಟ ವೀಡಿಯೊ ಸಹಿತ ದಾಖಲಾಗಿದ್ದು, ಪಾಲಿಕೆಯನಾಮನಿರ್ದೇಶಿತ ಸದಸ್ಯ ಅಮಾನುಲ್ಲಾಖಾನ್‌ ಸೇರಿದಂತೆ ಆ  ಸಭೆಯಲ್ಲಿ ಭಾಗವಹಿಸಿದ ಸದಸ್ಯರೆಲ್ಲರನ್ನು ಬಂಧಿಸಲು ಸೂಚನೆ ನೀಡಬೇಕು. ಜತೆಗೆ ತಪ್ಪಿತಸ್ಥರ ವಿರುದ್ಧ  ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಶುಕ್ರವಾರ ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಸಂಜೀವ ಕುಮಾರ್‌ ಅವರಿಗೆ ದೂರು ಸಲ್ಲಿಸಿತು.

Advertisement

ಕೆ.ಆರ್‌. ಪುರ ವ್ಯಾಪ್ತಿಯ ರಿಯಲ್‌ ಎಸ್ಟೇಟ್‌ ಉದ್ಯಮಿ ಎಂ.ಎಲ್‌.ಡಿ.ಸಿ. ಮುನಿರಾಜು ಕಚೇರಿಯಲ್ಲಿ ನಡೆದ ಸ್ಥಳೀಯ ಕಾಂಗ್ರೆಸ್‌ ಮುಖಂಡರ ಸಭೆಯಲ್ಲಿ ಮಾತನಾಡಿದ ಅಮಾನುಲ್ಲಾ ಖಾನ್‌ ಅವರ ಹೇಳಿಕೆಗಳು, ಜೀವಹಾನಿ ಮಾಡುವುದರ ಜತೆಗೆ ಧರ್ಮಗಳ ನಡುವೆ ಕಿಚ್ಚುಹಚ್ಚುವ ಯೋಜನೆ ಇದೆ. ಮತದಾರರು ಮುಕ್ತವಾಗಿ ನಿರ್ಣಯ ತೆಗೆದುಕೊಳ್ಳುವುದಕ್ಕೆ ಅಡ್ಡಿಯಾಗಿದ್ದು, ಜನ ರಕ್ಷಣೆ ಇಲ್ಲದೆ ಮತಗಟ್ಟೆ ಬರುವುದಕ್ಕೂ ಭಯ ಹುಟ್ಟಿಸುವಂತಿದೆ. ಈ ಹಿನ್ನೆಲೆಯಲ್ಲಿ ಸಭೆಯಲ್ಲಿ ಭಾಗವಹಿಸಿದ್ದ ಎಲ್ಲರನ್ನೂ ಬಂಧಿಸಬೇಕು. ನೀತಿ ಸಂಹಿತೆ ಉಲ್ಲಂಘನೆ, ಸಂಘಟಿತ ಅಪರಾಧ, ಜೀವಬೆದರಿಕೆ ಈ ಎಲ್ಲ ಅಪರಾಧಗಳಡಿ ಪ್ರಕರಣ ದಾಖಲಿಸಿಕೊಂಡು, ಸೂಕ್ತ ಕ್ರಮ ಜರುಗಿಸಬೇಕು ಎಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ
ಡಿ.ವಿ. ಸದಾನಂದಗೌಡ ದೂರಿನಲ್ಲಿ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next