Advertisement

ಮದ್ಯ ಮಾರಾಟ-ಜೂಜಾಟ ತಡೆಗೆ ಕ್ರಮ

05:46 PM Apr 25, 2022 | Team Udayavani |

ಕೂಡ್ಲಿಗಿ: ಅಕ್ರಮ ಮದ್ಯ ಮಾರಾಟ ಮತ್ತು ಜೂಜಾಟ ತಡೆಗಟ್ಟುವುದರ ಜೊತೆಗೆ ಯಾವುದೇ ರೀತಿಯ ಅಕ್ರಮ ಚಟುವಟಿಕೆ ನಡೆಯದಂತೆ ಸೂಕ್ತವಾದ ಕಾನೂನು ಕ್ರಮಗಳನ್ನು ಕೈಗೊಳ್ಳುವುದಾಗಿ ಪಿಎಸ್‌ಐ ಧನಂಜಯ್.ಎಂ ತಿಳಿಸಿದರು.

Advertisement

ಅವರು ಪೊಲೀಸ್‌ ಠಾಣೆ ವತಿಯಿಂದ ಅಮ್ಮನಕೇರಿ ಗ್ರಾಮದಲ್ಲಿ ಏರ್ಪಡಿಸಿದ್ದ ಕುಂದುಕೊರತೆ ಸಭೆಯಲ್ಲಿ ಮಾತನಾಡಿ, ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವುದು ಅತ್ಯವಶ್ಯಕವಾಗಿದ್ದು ಈ ನಿಟ್ಟಿನಲ್ಲಿ ಅಕ್ರಮ ಚಟುವಟಿಕೆ ನಿಯಂತ್ರಿಸಲು ಕಟ್ಟುನಿಟ್ಟಿನ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ತಿಳಿಸಿದರು.

ಅಜ್ಞಾನದ ಅಂಧಕಾರದಿಂದ ಹೊರಬಂತು ಒಳ್ಳೆಯ ಶಿಕ್ಷವನ್ನು ಪಡೆದು ಮಾದರಿ ವ್ಯಕ್ತಿಗಳಾಗಿ ಹೊರಬರಬೇಕಾಗಿದೆ ಎಂದರು. ಎಲ್ಲ ಮಕ್ಕಳಿಗೂ ಶಿಕ್ಷಣ ಕೊಡಿಸಿ ವಿದ್ಯಾವಂತರನ್ನಾಗಿ ಮಾಡುವುದು ತಂದೆ ತಾಯಿಗಳ ಆದ್ಯ ಕರ್ತವ್ಯವೆಂದು ನುಡಿದರು. ಮಹಿಳಾ ದೌರ್ಜನ್ಯದ ಬಗ್ಗೆ ದೂರುಗಳು ಬಂದಲ್ಲಿ ಅತಿ ತುರ್ತಾಗಿ ಕ್ರಮವಹಿಸಲಾಗುವುದು. ರಸ್ತೆ ಸುರಕ್ಷತೆ ಸೇರಿದಂತೆ ಸಂಚಾರ ನಿಯಮಗಳ ಬಗ್ಗೆ ಈಗಾಗಲೆ ಅರಿವು ಮೂಡಿಸಲಾಗಿದೆ ಎಂದು ತಿಳಿಸಿದರು.

ಪೊಲೀಸ್‌ ಇಲಾಖೆಯ ಸಿಬ್ಬಂದಿ ಹಂಪಣ್ಣ, ತಿಪ್ಪಸ್ವಾಮಿ, ಮಹೇಶ ದುರಗಪ್ಪ, ಬಸವ, ನಿಂಗಪ್ಪ, ಗ್ರಾಮದ ಜನರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next