Advertisement

ಮದುವೆಗೆ ನಿರಾಕರಿಸಿದ ಪ್ರಿಯತಮನ ಮುಖ ಇರಿದು ಆ್ಯಸಿಡ್‌ ಎರಚಿದ ಪ್ರೇಯಸಿ

04:32 PM Jan 17, 2017 | Team Udayavani |

ಬೆಂಗಳೂರು :ಸಾಮಾನ್ಯವಾಗಿ ಯುವತಿಯರ ಮೇಲೆ ಯುವಕರು ಆ್ಯಸಿಡ್‌ ಎರಚುವುದು ಕೇಳಿರುತ್ತೇವೆ ಆದರೆ ಶ್ರೀರಾಂಪುರದಲ್ಲಿ ಸೋಮವಾರ ರಾತ್ರಿ ನಡೆದ ಘಟನೆಯಲ್ಲಿ ಯುವತಿಯೊಬ್ಬಳು ಮದುವೆಗೆ ನಿರಾಕರಿಸಿದ ಪ್ರಿಯಕರನ ಮೇಲೆ ಆ್ಯಸಿಡ್‌ ಎರಚಿದ್ದಾಳೆ.

Advertisement

ಜಯಕುಮಾರ್‌ ಎಂಬ ಯುವಕ ಗಂಭೀರವಾಗಿ ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಸಂಬಂಧ ವಿಜಯನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು ದಾಳಿ ನಡೆಸಿದ್ದಾಳೆ ಎನ್ನಲಾದ ಲಿಡಿಯಾ ಎಂಬ ಯುವತಿಯನ್ನು ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

ಲಿಡಿಯಾ  ಮತ್ತು ಕಿರಣ್‌ ಕಳೆದ 3 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇದೀಗ ಮದುವೆಯಾಗಲು ನಿರಾಕರಿಸಿ ವಂಚಿಸಲು ಮುಂದಾಗಿದ್ದಾನೆ ಎಂದು ಹತಾಶಳಾದ ಲಿಡಿಯಾ ಮುಖಕ್ಕೆ ಚಾಕುವಿನಿಂದ ಇರಿದು ಗಾಯಗೊಳಿಸಿ ಆ್ಯಸಿಡ್‌ ಮಾದರಿಯ ವಸ್ತು ಎರಚಿ ಮುಖ ವಿರೂಪಗೊಳಿಸಿರುವುದಾಗಿ ವರದಿಯಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next