Advertisement

ಚಿತ್ರರೂಪದಲ್ಲಿ ಆಚಾರ್ಯ ಶ್ರೀಶಂಕರ

01:06 PM Dec 29, 2020 | Suhan S |

ಆದಿ ಶಂಕರಾಚಾರ್ಯರ ಜೀವನ -ಸಾಧನೆಗಳನ್ನು ಕುರಿತು ಹಲವುಕೃತಿಗಳು, ಸಾಕ್ಷ್ಯಚಿತ್ರಗಳು, ಸಿನಿಮಾಗಳುಈಗಾಗಲೇ ಬಂದಿವೆ. ಈಗ ಶಂಕರಾಚಾರ್ಯ ಜೀವನದ ಇನ್ನಷ್ಟುಅಂಶಗಳನ್ನು ತೆರೆಮೇಲೆ ಹೇಳುವಂಥ ಮತ್ತೂಂದು ಹೊಸಚಿತ್ರ ತಯಾರಾಗುತ್ತಿದೆ. ಅಂದಹಾಗೆ, ಆ ಚಿತ್ರದ ಹೆಸರು “ಆಚಾರ್ಯ ಶ್ರೀಶಂಕರ’.

Advertisement

ಭಾರತದ ಸನಾತನ ಸಂಸ್ಕೃತಿಯನ್ನು ಇಡೀ ಜಗತ್ತಿಗೆ ಸಾರಿಹೇಳಿದವರು ಶಂಕರಾಚಾರ್ಯರು.ಕೇವಲ 32 ವಯಸ್ಸಿಗೆ ಭಾರತದ ಮೂಲೆ ಮೂಲೆಗಳಿಗೆ ಸಂಚರಿಸಿ ಅದ್ವೆ„ತಸಿದ್ಧಾಂತವನ್ನು ಪ್ರತಿಪಾದಿಸಿ, ಅದನ್ನು ಜಗತ್ತಿಗೆ ಸಾರಿದ ಆದಿ ಶಂಕರರ ಜೀವನಬಾಲ್ಯ, ಯೌವ್ವನ ಮತ್ತು ನಿರ್ಗಮನದ ಅಪರೂಪದ ಸಂಗತಿಗಳು “ಆಚಾರ್ಯ ಶ್ರೀ ಶಂಕರ’ ಚಿತ್ರದಲ್ಲಿದೆಯಂತೆ. ಈ ಚಿತ್ರವನ್ನು ವೀಕ್ಷಿಸಿದ ಸೆನ್ಸಾರ್‌ ಮಂಡಳಿಚಿತ್ರಕ್ಕೆ “ಯು’ ಪ್ರಮಾಣ ಪತ್ರ ನೀಡಿದ್ದಾರೆ.

ಚಿತ್ರ ಶೀಘ್ರದಲ್ಲಿ ಬಿಡುಗಡೆಯಾಗಲಿದೆ. ಕನ್ನಡ, ತೆಲುಗು ಮತ್ತು ಸಂಸ್ಕೃತ ಭಾಷೆಗಳಲ್ಲಿ ಏಕಕಾಲದಲ್ಲಿ ತಯಾರಾಗುತ್ತಿರುವ “ಆಚಾರ್ಯ ಶ್ರೀಶಂಕರ’ ಚಿತ್ರಕ್ಕೆ ವೃತ್ತಿಯಲ್ಲಿ ಲೆಕ್ಕ ಪರಿಶೋಧಕರಾಗಿರುವ ವೈ.ಎನ್‌. ಶರ್ಮಾಮತ್ತು ವಿಜಯಲಕ್ಷ್ಮೀ “ಎಮ್ಮನೂರು ಕ್ರಿಯೇಷನ್ಸ್‌’ ಬ್ಯಾನರ್‌ನಲ್ಲಿನಿರ್ಮಿಸುತ್ತಿದ್ದಾರೆ. ಈ ಹಿಂದೆ ರಿಯಲ್‌ಸ್ಟಾರ್‌ ಉಪೇಂದ್ರ ಅಭಿನಯದ “ಶ್ರೀಮತಿ’, “ಭಗವದ್‌ ಶ್ರೀರಾಮಾನುಜ’, “ಅಷ್ಟಾವಕ್ರ’ ಚಿತ್ರಗಳನ್ನು ನಿರ್ದೇಶನ ಮಾಡಿದ್ದ ರಾಜಾ ರವಿಶಂಕರ್‌,  “ಆಚಾರ್ಯ ಶ್ರೀ ಶಂಕರ’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಇದನ್ನೂ ಓದಿ : ರಾಜಕೀಯ ಪಕ್ಷ ಸ್ಥಾಪನೆಯಿಲ್ಲ ಎಂದ ಸೂಪರ್ ಸ್ಟಾರ್: ಮಹತ್ವದ ನಿರ್ಧಾರ ಪ್ರಕಟಿಸಿದ ರಜಿನಿ

ಇನ್ನೊಂದು ವಿಶೇಷವೆಂದರೆ, ಶೃಂಗೇರಿ ದಕ್ಷಿಣಾಮ್ಯಾಯ ಶಾರದಾ ಪೀಠದ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳು”ಆಚಾರ್ಯ ಶ್ರೀ ಶಂಕರ’ ಚಿತ್ರದ ಕಥೆ, ಚಿತ್ರಕತೆ ಮತ್ತು ಸಂಭಾಷಣೆಯನ್ನುಪರಾಮರ್ಶಿಸಿ, ಸಮ್ಮತಿಸಿದನಂತರವಷ್ಟೇ ಚಿತ್ರೀಕರಣ ಆರಂಭಿಸಲಾಗಿತ್ತು.

Advertisement

ಇನ್ನು “ಆಚಾರ್ಯ ಶ್ರೀ ಶಂಕರ’ ಚಿತ್ರದಲ್ಲಿ ಶಂಕರಾಚಾರ್ಯರ ಪಾತ್ರದಲ್ಲಿ ರವೀಂದ್ರ ಭಾಗವತ್‌ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಹಿರಿಯ ನಟರಾದ ರಾಮಕೃಷ್ಣ, ರಮೇಶಭಟ್‌, ಮಾ. ಲಿಖೀತ ಶರ್ಮಾ, ಮಾ. ಬಿ.ಪಿ. ರೋಹಿತ್‌ ಶರ್ಮಾಮೊದಲಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆಸಿ. ನಾರಾಯಣಛಾಯಾಗ್ರಹಣ, ಆರ್‌.ದೊರೆರಾಜ್‌ (ಆರ್‌.ಡಿರವಿ) ಸಂಕಲನವಿದೆ.ಚಿತ್ರದ ಹಾಡುಗಳಿಗೆಅರ್ಜುನ್‌ ಜನ್ಯಸಂಗೀತ ಸಂಯೋಜಿಸಿದ್ದಾರೆ.

ಇದೇ ಜನವರಿ ತಿಂಗಳಲ್ಲಿ ಶೃಂಗೇರಿಯಲ್ಲಿ ಸೆಟ್ಟೇರಿದ್ದ “ಆಚಾರ್ಯ ಶ್ರೀ ಶಂಕರ’ ಚಿತ್ರದ ಚಿತ್ರೀಕರಣವನ್ನು ತೀರ್ಥಹಳ್ಳಿ, ಕುಂದಾಪುರ, ದೇವರಾಯನ ದುರ್ಗ ಮೊದಲಾದ ಕಡೆಗಳಲ್ಲಿ ನಡೆಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next