Advertisement

ಬಿಬಿಎಂಪಿ ಎಂಜಿನಿಯರ್‌ ಅಂಜಿನಪ್ಪ ಮನೆ ಮೇಲೆ ಎಸಿಬಿ ದಾಳಿ

03:22 PM Jan 23, 2021 | Team Udayavani |

ದಾವಣಗೆರೆ: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಬೊಮ್ಮನಹಳ್ಳಿ ವ್ಯಾಪ್ತಿಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಸಿ.ಎ. ಅಂಜಿನಪ್ಪ ಅವರ ದಾವಣಗೆರೆ ತಾಲೂಕಿನ ಲೋಕಿಕೆರೆ ಗ್ರಾಮದಲ್ಲಿರುವ ಮನೆ ಮೇಲೆ ಎಸಿಬಿ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದ್ದಾರೆ.

Advertisement

ದಾವಣಗೆರೆಯ ಭ್ರಷ್ಟಾಚಾರ ನಿಗ್ರಹ ದಳ ಠಾಣೆಯಲ್ಲಿ ಅಂಜಿನಪ್ಪ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಕುರಿತು ದೂರು ದಾಖಲಾಗಿದ್ದು, ಅಂಜಿನಪ್ಪ ಕೆಲಸ ಮಾಡುತ್ತಿರುವ ಬೆಂಗಳೂರಿನ ಜೀವನ ಬಿಮಾ ನಗರದ ನಿವಾಸ, ಲೋಕಿಕೆರೆಯಲ್ಲಿನ ಮನೆ ಹಾಗೂ ಅಂಜಿನಪ್ಪನವರ ಪತ್ನಿ ಊರು ಚನ್ನಗಿರಿ ತಾಲೂಕಿನ ಎರೇಹಳ್ಳಿ ನಿವಾಸದ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ. ಲೋಕಿಕೆರೆ ಗ್ರಾಮದಲ್ಲಿ ಒಂದೂವರೆ ವರ್ಷದ ಹಿಂದೆ ಮನೆ ಕಟ್ಟಿಸಲಾಗಿದೆ. ದಾಳಿ ವೇಳೆ 9 ಲಕ್ಷ ನಗದು, 22 ಎಕರೆ ಜಮೀನಿಗೆ ಸಂಬಂಧಿಸಿದ ದಾಖಲೆ, ವಾಹನಗಳು ಪತ್ತೆಯಾಗಿವೆ. ಪರಿಶೀಲನೆ ಮುಂದುವರಿದಿದ್ದು, ದಾವಣಗೆರೆ,ಶಿವಮೊಗ್ಗ, ಬೆಂಗಳೂರು ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ. ಅಕ್ರಮ ಆಸ್ತಿ ಸಂಪಾದನೆಗೆ ಸಂಬಂಧಿಸಿ ಈ ಹಿಂದೆಯೂ ದಾಳಿ ನಡೆದಿತ್ತು ಎನ್ನಲಾಗಿದೆ.

ಇದನ್ನೂ ಓದಿ:ಸಿಎಂ ಆಗಲು ಇನ್ನೂ  ಸಮಯವಿದೆ: ಕತ್ತಿ

Advertisement

Udayavani is now on Telegram. Click here to join our channel and stay updated with the latest news.

Next